Connect with us

    DAKSHINA KANNADA

    ಮುಲ್ಕಿ – ಪ್ರಿಯತಮೆ ಅಗಲಿಕೆ ನೋವು ತಡೆಯಲಾರದೆ ರೈಲಿಗೆ ತಲೆಕೊಟ್ಟ ಯುವಕ

    ಮುಲ್ಕಿ ಮೇ 20: ಯುವಕನನೊಬ್ಬ ತನ್ನ ಪ್ರೇಯಸಿ ಅಗಲಿಕೆಯ ನೋವನ್ನು ತಡೆಯಲಾಗದೇ ರೈಲಿಗೆ ತಲೆಕೊಟ್ಟು ಸಾವನಪ್ಪಿದ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ಮೈಲೊಟ್ಟು ನಿವಾಸಿ ಕಾರ್ತಿಕ್‌ (20) ಮೃತ ಯುವಕ. ಅವರು ಮೂಡಬಿದಿರೆ ತಾಲ್ಲೂಕಿನ ಯುವತಿಯನ್ನು ಪ್ರೀತಿಸುತ್ತಿದ್ದರು. ಆಕೆಯ ತಾಯಿಯ ಮನೆ ಮೂಲ್ಕಿಯಲ್ಲಿತ್ತು. ಇಲ್ಲಿನ ಕಾಲೇಜೊಂದರಲ್ಲಿ ಬಿಬಿಎಂ ಓದುತ್ತಿದ್ದಾಗ ಅವರ ನಡುವೆ ಪ್ರೀತಿ ಬೆಳೆದಿತ್ತು ಎಂದು ಕಾರ್ತಿಕ್‌ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮನೆಯಲ್ಲಿ ಇಬ್ಬರ ಪ್ರೀತಿಯ ವಿಷಯ ತಿಳಿದ ಬಳಿಕ ಯುವತಿಯನ್ನು ಆಕೆಯ ಮನೆಯವರು ಕಾಲೇಜು ಬಿಡಿಸಿ, ಮೂಡುಬಿದಿರೆಯ ಮನೆಯಲ್ಲೇ ಉಳಿಸಿಕೊಂಡಿದ್ದರು. ಆ ಯುವತಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕಾರ್ತಿಕ್‌ ಆಕೆಯ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಶನಿವಾರ ಮೂಡಬಿದಿರೆಗೆ ತೆರಳಿದ್ದರು. ಆಕೆಯ ಮೃತದೇಹವನ್ನು ವೀಕ್ಷಿಸಲು ಮನೆಯವರು ಅವಕಾಶ ನೀಡಿರಲಿಲ್ಲ. ಇದರಿಂದ ಯುವಕ ಬೇಸರಗೊಂಡಿದ್ದ ಎಂದು ಆತನ ನಿಕಟವರ್ತಿಗಳು ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply