Connect with us

    LATEST NEWS

    ಕಾರ್ಕಳ -ಮೀನು ಹಿಡಿಯಲು ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವು

    ಕಾರ್ಕಳ ಮೇ 20: ಮೀನು ಹಿಡಿಯಲು ತೆರಳಿದ್ದ ಮಾವ ಮತ್ತು ಅಳಿಯ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುದೆಲ್ಕಡಿ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತರನ್ನು ದರ್ಖಾಸು ನಿವಾಸಿ ಹರೀಶ್ ಪೂಜಾರಿ( 43) ಮತ್ತು ಸಹೋದರಿ ಮಗ ಕೆರ್ವಾಶೆಯ ಪಾಚಾರಬೆಟ್ಟು ನಿವಾಸಿ ಬಾಲಕ ರಿತೇಶ್(17) ಎಂದು ಗುರುತಿಸಲಾಗಿದೆ.


    ಬೇಸಿಗೆ ರಜೆ ಹಿನ್ನಲೆ ಮಾವನ ಮನೆಗೆ ಬಂದಿದ್ದ ರಿತೇಶ್ ಬಲೆ ಹಾಕಿ ಮೀನು ಹಿಡಿಯಲು ಉಬ್ರೇಲು ಗುಂಡಿ ಕೆರೆಗೆ ತೆರಳಿದ್ದರು. ಮೀನು ಹಿಡಿಯಲೆಂದು ನೀರಿಗೆ ಇಳಿದಿದ್ದ ವೇಳೆ ರಿತೇಶ್ ಕಾಲು ಕೆಸರಿನಲ್ಲಿ ಸಿಲುಕಿಕೊಂಡು ಮುಳುಗಿದ್ದಾನೆ. ಈ ವೇಳೆ ರಕ್ಷಣೆಗೆಂದು ತೆರಳಿದ ಮಾವ ಹರೀಶ್ ಪೂಜಾರಿ ಕೂಡ ಕೆಸರು ನೀರಿನಲ್ಲಿ ಸಿಲುಕಿಕೊಂಡು ಮುಳುಗಿ ಮೃತಪಟ್ಟರು.ಘಟನೆ ಮನೆಯ ಪಕ್ಕದಲ್ಲೆ ನಡೆದಿದೆ.

    ಘಟನೆ ನಡೆದಾಗ ಹತ್ತಿರದಲ್ಲಿ ಕುಟುಂಬ ಸದಸ್ಯರು ಇದ್ದು ಅಪಾಯದ ಮುನ್ಸೂಚನೆ ಅರಿತು ರಕ್ಷಣೆಗೆ ಬೊಬ್ಬೆ ಹಾಕಿದ್ದಾರೆ.ಆದರೆ ರಕ್ಷಿಸಲು ಸಾಧ್ಯವಾಗದೆ ಅಸಹಾಯಕರಾದರು. ನೋಡನೋಡುತ್ತಿದ್ದಂತೆ ಅವರಿಬ್ಬರು ಮುಳುಗಿ ಮೃತಪಟ್ಟರು. ಮೃತ ಹರೀಶ್ ಪೂಜಾರಿ ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply