Connect with us

LATEST NEWS

ಮೆಸ್ಕಾಂ ನಿರ್ಲಕ್ಷ್ಯ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ ಮತ್ತು ಮಗಳ ಸಾವು

ಮೆಸ್ಕಾಂ ನಿರ್ಲಕ್ಷ್ಯ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ ಮತ್ತು ಮಗಳ ಸಾವು

ಉಡುಪಿ 20: ಉಡುಪಿಯ ಪೆರ್ಣಂಕಿಲ ಗ್ರಾಮಪಂಚಾಯತ್ ವ್ಯಾಪ್ತಿಯ ಗುಂಡುಪಾದೆಯಲ್ಲಿ ವಿದ್ಯುತ್ ಸ್ಪರ್ಶಿಸಿ ತಾಯಿ ಮತ್ತು ಪುತ್ರಿ ಸಾವನಪ್ಪಿದ ಘಟನೆ ನಡೆದಿದೆ.

ಮೃತಪಟ್ಟವರನ್ನು ತಾಯಿ ಜಲಜಾ(80) ಮತ್ತು ಪುತ್ರಿ ಸುಮತಿ(55) ಎಂದು ಗುರುತಿಸಲಾಗಿದೆ. ಅವರ ಮನೆಯ ಮುಂದೆ ಸುಮಾರು 40 ವರ್ಷಗಳ ಹಳೆಯ ವಿದ್ಯುತ್ ಮೈನ್ ಸಂಪರ್ಕ ತಂತಿ ಹಾದು ಹೋಗಿದ್ದು , ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ತಂತಿ ತುಂಡಾಗಿ ಬಿದ್ದಿದೆ.

ಇದರ ಬಗ್ಗೆ ಮಾಹಿತಿ ಇಲ್ಲದ ಸುಮತಿ ಅವರು ಮನೆಯ ಆವರಣದ ಗೇಟ್ ನ್ನು ತೆಗೆಯಲು ಹೋದಾಗ ತಂತಿ ಸ್ಪರ್ಶವಾಗಿ ವಿದ್ಯತ್ ಆಘಾತಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಸುಮತಿಯವರ ಬೊಬ್ಬೆ ಕೇಳಿ ಓಡಿ ಬಂದ ತಾಯಿಯೂ ವಿದ್ಯುತ್ ಅಪಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೀರಬೆಟ್ಟು- ಮರ್ಣಿ- ಗುಂಡುಪಾದೆ ಮತ್ತಿತರ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ಬಹಳ ಹಳೆಯದಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಸಾರ್ವಜನಿಕರ ರಸ್ತೆ , ವಾಸದ ಮನೆಗಳಿದ್ದು, ಹೊಸ ತಂತಿಗಳನ್ನು ಆಳವಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಮೆಸ್ಕಾಂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *