Connect with us

    LATEST NEWS

    ಸಾವಿನ ಬಗ್ಗೆ ದೈವ ನೀಡಿದ್ದ ನುಡಿಯನ್ನು ವಿಡಂಬನೆ ಮಾಡಿದ್ದ ಶಿರೂರು ಶ್ರೀಗಳ ವಿಡಿಯೋ ವೈರಲ್

    ಸಾವಿನ ಬಗ್ಗೆ ದೈವ ನೀಡಿದ್ದ ನುಡಿಯನ್ನು ವಿಡಂಬನೆ ಮಾಡಿದ್ದ ಶಿರೂರು ಶ್ರೀಗಳ ವಿಡಿಯೋ ವೈರಲ್

    ಮಂಗಳೂರು ಜುಲೈ 20: ಧರ್ಮ ನೇಮೋತ್ಸವ ಸಂದರ್ಭದಲ್ಲಿ ದೈವ ನೀಡಿದ್ದ ಅಸಹಜ ಸಾವಿನ ಮುನ್ಸೂಚನೆಯನ್ನು ವಿಡಂಬನೆ ಮಾಡಿದ್ದ ಶಿರೂರು ಶ್ರೀಗಳ ವಿಡಿಯೋ ಈ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೈವದ ನುಡಿಯನ್ನು ನಿರ್ಲಕ್ಷಿಸಿದ್ದೆ ಶ್ರೀಗಳ ಸಾವಿಗೆ ಕಾರಣವಾಗಿದೆ ಎಂಬ ಚರ್ಚೆಗಳು ಈಗ ಆರಂಭವಾಗಿದೆ.

    2 ತಿಂಗಳ ಹಿಂದೆ ಪಡುಬಿದ್ರೆ ಬಾಲು ಪೂಜಾರಿ ಮನೆತನದಲ್ಲಿ ಧರ್ಮದೈವ ಶ್ರೀಕೊಡಮಣಿತ್ತಾಯ ಧರ್ಮ ನೇಮೋತ್ಸವ ನಡೆದಿತ್ತು. ಈ ಸಂದರ್ಭದಲ್ಲಿ ಶಿರೂರೂ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿಗಳು ಉಪಸ್ಥಿತರಿದ್ದರು. ಈ ಧರ್ಮನೇಮದ ಸಂದರ್ಭದಲ್ಲಿ ಶ್ರೀಗಳು ನಡೆಸಿದ ಅನುಚಿತ ವರ್ತನೆ ಶಿರೂರು ಶ್ರೀಗಳ ಬದುಕಿಗೆ ಕುತ್ತಾಯಿತೇ ಎನ್ನುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹು ಚರ್ಚಿತ ವಿಷಯವಾಗಿದ್ದು, ಅದಕ್ಕೆ ಪುಷ್ಠಿ ನೀಡುವ ವಿಡಿಯೋ ಒಂದು ವೈರಲ್ ಆಗಿದೆ.

    ದೈವದ ನಡೆಯಲ್ಲಿ ನಡೆಯುವ ಕಟ್ಟು-ಪಾಡುಗಳ ವಿಡಂಬನೆ ಜೀವಹಾನಿಗೆ ಕಾರಣವಾದ ಅನೇಕ ಉದಾಹರಣೆಗಳಿವೆ. ಇತ್ತೀಚೆಗೆ ಕರಾವಳಿಯ ಕಾರಣೀಕ ದೈವ ಕೊರಗಜ್ಜ ದೈವಕ್ಕೆ ಇದೇ ರೀತಿಯ ಅಪಚಾರ ನಡೆಸಿದ್ದ ವ್ಯಕ್ತಿಗಳು ಹಲವು ರೀತಿಯ ತೊಂದರೆಗಳಿಗಾಗಿ ಒಳಗಾಗಿ ನಂತರ ದೈವದ ಹತ್ತಿರ ತಮ್ಮ ತಪ್ಪಿಗೆ ಕ್ಷಮಾಪಣೆ ಕೇಳಿದ ಘಟನೆ ನಡೆದಿತ್ತು.

    ಈಗ ಶಿರೂರು ಶ್ರೀಗಳು ಇದೇ ರೀತಿಯಲ್ಲಿ ದೈವಕ್ಕೆ ಅಪಚಾರ ಎಸಗಿದ್ದಾರೆ ಎಂಬ ರೀತಿಯಲ್ಲಿ ಚರ್ಚೆಗಳು ಆರಂಭವಾಗಿದೆ. ಇದು ಅವರ ಜೀವಕ್ಕೆ ಕುತ್ತಾಗಿರಬಹುದು ಎಂದು ಹೇಳಲಾಗಿದೆ.

    2 ತಿಂಗಳ ಹಿಂದೆ ಪಡುಬಿದ್ರೆ ಬಾಲು ಪೂಜಾರಿ ಮನೆತನದಲ್ಲಿ ಧರ್ಮ ನೇಮೋತ್ಸವ ನಡೆದಿತ್ತು. ಈ ವೇಳೆ ಸ್ವತಃ ಶೀರೂರು ಶ್ರೀಗಳು ಉಪಸ್ಥಿತರಿದ್ದರು. ಈ ಸಂದರ್ಭ ಶೀರೂರು ಶ್ರೀಗಳಿಗೆ ಅಪಾಯ ಇದೆ ದೈವ ಶ್ರೀಗಳಿಗೆ ನುಡಿದಿತ್ತು. ದೈವದ ಈ ನುಡಿ ಬಗ್ಗೆ ಶ್ರೀಗಳು ಯಾವುದೇ ಗಮನ ಹರಿಸಿರಲಿಲ್ಲ. ಇದೀಗ ಶೀರೂರು ಶ್ರೀಗಳ ಅಸಹಜ ಸಾವಿನ ಬಗ್ಗೆ ಮೊದಲೇ ನುಡಿದಿದ್ದ ಧರ್ಮದೈವ ನುಡಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply