Connect with us

LATEST NEWS

ಜೋಳಿಗೆ ಹಿಡಿದು ಬಂದವರು ಮಾಡಿದ ಸ್ವತ್ತು ಸಂಪತ್ತು ಎಷ್ಟು – ರಮಾನಾಥ ರೈ

ಜೋಳಿಗೆ ಹಿಡಿದು ಬಂದವರು ಮಾಡಿದ ಸ್ವತ್ತು ಸಂಪತ್ತು ಎಷ್ಟು – ರಮಾನಾಥ ರೈ

ಉಡುಪಿ ಜನವರಿ 25: ಮತೀಯ ಭಾವನೆ ತುಂಬಿರುವ ಶಾಸಕ ಸುನಿಲ್ ಕುಮಾರ್ ನನ್ನ ಕ್ಷೇತ್ರ ಬಂಟ್ವಾಳದಲ್ಲಿ ಬಂದು ಪ್ರಚೋದನಕಾರಿಯಾಗಿ ಭಾಷಣ ಮಾಡುತ್ತಿದ್ದಾರೆ ಎಂದು ಅರಣ್ಯ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ಕಾರ್ಕಳದಲ್ಲಿ ಮಾತನಾಡಿದ ಅರಣ್ಯ ಸಚಿವ ರಮಾನಾಥ ರೈ ಮತೀಯ ಸೂಕ್ಷ್ನ ಪ್ರದೇಶವಾದ ಬಂಟ್ವಾಳದಲ್ಲಿ ಬಂದು ಚುನಾವಣೆ ರಾಜೇಶ್ ನಾಯಕ್ ಮತ್ತು ರಮಾನಾಥ್ ರೈ ನಡುವೆ ಅಲ್ಲ ರಾಮ ಮತ್ತು ಅಲ್ಲಾ  ನಡುವೆ ಚುನಾವಣೆ ಎಂದು ಕನಿಷ್ಟ ಜ್ಙಾನ ಇಲ್ಲದ ಸುನಿಲ್ ಕುಮಾರ್ ಈ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

‍ದೇವರು ಒಬ್ಬನೇ ಎಂದು ನಾನು ತಿಳಿದುಕೊಂಡಿದ್ದು, ದೇವರ ಮೇಲೆ ನಂಬಿಕೆ ಗೌರವ ಇದ್ದವರು ಈ ರೀತಿಯ ಸಣ್ಣ ಮಾತು ಆಡಬಾರದು, ಒಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿ ಈ ರೀತಿಯ ರ‍್ಯಾಡಿಕಲ್ಸ್ ಗೆ ಅವಕಾಶ ನೀಡಿರುವುದು ಸಮಾಜಕ್ಕೆ ಮಾಡಿದ ಅವಮಾನ ಎಂದು ಹೇಳಿದರು.

ಕಾರ್ಕಳ ಶಾಸಕ ಸುನಿಲ್ ಕುಮಾರ್‍ ಮನಸಲ್ಲಿ ಮತೀಯ ವಿಚಾರವೇ ತುಂಬಿದೆ, ಹುಲಿಯೋಜನೆ ಹೆಸರಲ್ಲಿ  ಭಯ ಹುಟ್ಟಿಸಿ ಸುಳ್ಳು ಹೇಳಿ ಶಾಸಕರಾದವರು,  ಜೋಳಿಗೆ ಹಿಡಿದು ಬಂದವರು ಎಷ್ಟು ಸ್ವತ್ತು ಸಂಪತ್ತು ಮಾಡಿದ್ದಾರೆ ಎಂದು ಗೊತ್ತಿದೆ ಎಂದು ಆರೋಪಿಸಿದರು.

ಧರ್ಮದ ದೇವರ ಹೆಸರಲ್ಲಿ ರಾಜಕೀಯ ಮಾಡುವ ಸುನಿಲ್ ಕುಮಾರ್  ‍ಚುನಾವಣೆ ಬಂದಾಗ ನನ್ನ ಕ್ಷೇತ್ರದಲ್ಲಿ ಮತೀಯ ವಿಚಾರ ಎತ್ತಿರುವುದು ಸರಿಯಲ್ಲ, ಸುನಿಲ್ ಕುಮಾರ್‍ ನನ್ನ ಜಾತ್ಯಾತೀತ ನಿಲುವು ಪ್ರಶ್ನಿಸುತ್ತಿದ್ದಾರೆ  ನನ್ನನ್ನು ಸುನಿಲ್ ಕುಮಾರ್‍ ರಿಂದ ಏನೂ ಮಾಡಲು ಆಗಲ್ಲ ಎಂದು ಅರಣ್ಯ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *