Connect with us

    DAKSHINA KANNADA

    ಮಾತು ಕೇಳದಿದ್ದರೆ ನೀರಿಲ್ಲದ ಕಡೆ ವರ್ಗ- ವೈರಲ್ ಆಯಿತು ಶಾಸಕಿ ಶಕುಂತಲಾ ಶೆಟ್ಟಿ ದರ್ಪ

    ಮಾತು ಕೇಳದಿದ್ದರೆ ನೀರಿಲ್ಲದ ಕಡೆ ವರ್ಗ- ವೈರಲ್ ಆಯಿತು ಶಾಸಕಿ ಶಕುಂತಲಾ ಶೆಟ್ಟಿ ದರ್ಪ

    ಮಂಗಳೂರು, ಮೇ 5: ತನ್ನ ಮಾತು ಕೇಳದ ಅಧಿಕಾರಿಗಳನ್ನು ನೀರಿಲ್ಲದ ಕಡೆ ವರ್ಗಾವಣೆ ಮಾಡುವುದಾಗಿ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ದರ್ಪ ಪ್ರದರ್ಶಿಸುತ್ತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

    ಪುತ್ತೂರು ನಗರಸಭಾ ವ್ಯಾಪ್ತಿಯ ದರ್ಬೆ ವೃತ್ತದ ಬಳಿ ಚರಂಡಿ ಕಾಮಗಾರಿಗೆ ಸಂಬಂಧಿದಂತೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಶಾಸಕಿ ಶಕುಂತಲಾ ಶೆಟ್ಟಿ ಈ ದರ್ಪ ಪ್ರದರ್ಶಿಸಿದ್ದಾರೆ ಎಂದು ತಿಳಿದು ಬಂದಿದೆ.

    ನಗರಸಭಾ ಆಯುಕ್ತೆ ರೂಪಾ ಶೆಟ್ಟಿ ಸೇರಿದಂತೆ ಹಲವು ಅಧಿಕಾರಿಗಳು ಸೇರಿದಂತೆ ಕಾಂಗ್ರೇಸ್ ಪಕ್ಷದ ಕೆಲವು ಮುಖಂಡರೂ ಶಾಸಕಿ ಜೊತೆಗಿದ್ದ ಸಂದರ್ಭದಲ್ಲಿ ಶಾಸಕಿ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.

    ಯಾವುದೋ ವಿಚಾರವೊಂದಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೋರ್ವರು ಶಾಸಕಿಗೆ ದೂರು ನೀಡುತ್ತಿದ್ದ ಸಂದರ್ಭದಲ್ಲಿ ತನ್ನ ಮಾತು ಕೇಳದ ಅಧಿಕಾರಿಯನ್ನು ನೀರಿಲ್ಲದ ಕಡೆ ವರ್ಗಾವಣೆ ಮಾಡುತ್ತೇನೆ ಎಂದಿದ್ದಾರೆ.

    ಅದು ಗುಲ್ಬರ್ಗಾ, ಬೀದರ್ ಕೂಡಾ ಆಗಬಹುದು ಎಂದು ತನ್ನ ದರ್ಪವನ್ನು ಮೆರೆದಿದ್ದಾರೆ. ಅಧಿಕಾರಿಯೋರ್ವರೇ ಈ ವಿಡಿಯೋ ಚಿತ್ರೀಕರಿಸಿರುವ ಸಾಧ್ಯೆತೆಯಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳ ತುಂಬಾ ವೈರಲ್ ಆಗುತ್ತಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply