LATEST NEWS
ವೀರಪ್ಪ ಮೊಯಿಲಿ ಒಬ್ಬ ತಲೆತಿರುಕ – ಯಡಿಯೂರಪ್ಪ
ವೀರಪ್ಪ ಮೊಯಿಲಿ ಒಬ್ಬ ತಲೆತಿರುಕ – ಯಡಿಯೂರಪ್ಪ
ಉಡುಪಿ ಮೇ 5: ಬಿಜೆಪಿ ಕಾಂಗ್ರೇಸ್ ನ ಪ್ರಣಾಳಿಕೆ ನಕಲು ಮಾಡಿದ ಎಂಬ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿಕಾರಿದ್ದಾರೆ. ಕಾಂಗ್ರೇಸ್ ಮುಖಂಡ ವೀರಪ್ಪ ಮೊಯ್ಲಿ ಒಬ್ಬ ತಲೆತಿರುಕ, ನಾವು ಕಾಂಗ್ರೇಸ್ ನ ಪ್ರಣಾಳಿಕೆ ನಕಲು ಮಾಡಿಲ್ಲ ಎಂದು ತಿಳಿಸಿದರು.
ಸಿದ್ದಾಪುರದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಈಗ ಕಾಂಗ್ರೇಸ್ ನವರು ಲೋಕಾಯುಕ್ತ ಬಲಪಡಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಇಷ್ಟು ದಿನ ಏನು ಕತ್ತೆ ಕಾಯ್ತಾ ಇದ್ರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದಲ್ಲಿ ಹೇಗೆ ಅಧಿಕಾರಕ್ಕೆ ಬಂತೊ ಹಾಗೆ ಕರ್ನಾಟಕದಲ್ಲಿ ಅಧಿಕಾರದಲ್ಲಿ ಬರಲಿದೆ, ದೇಶದ 22 ನೇ ರಾಜ್ಯವಾಗಿ ಕರ್ನಾಟಕದಲ್ಲಿ ಬಿಜೆಪಿ ನೂರಕ್ಕೆ ನೂರು ಬರಲಿದೆ. ನಾನು ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತ ಎಂದು ತಿಳಿಸಿದರು.
ಕಾಂಗ್ರೆಸ್ ಮನೆಯಲ್ಲಿ ಮೂರು ಬಾಗಿಲುಗಳಿದ್ದು, ಖರ್ಗೆ, ಸಿದ್ದು ಮತ್ತು ಪರಮೇಶ್ವರ ನಾನೆ ಸಿಎಂ ಎನ್ನುತ್ತಿದ್ದಾರೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಯೊಳಗೆ ರೈತರ ಒಂದು ಲಕ್ಷದವರೆಗೆ ಸಾಲ ಮನ್ನಾ ಮಾಡುತ್ತೆನೆ, ಇದರಿಂದ ೨೦ ಲಕ್ಷ ರೈತ ಸಮುದಾಯಕ್ಕೆ ಸಹಾಯವಾಗಲಿದೆ ಎಂದರು. ರೈತರಿಗೆ ಕನಿಷ್ಟ 10 ಗಂಟೆ ವಿದ್ಯುತ್ ನೀಡಲಿದ್ದೇವೆ ಎಂದು ತಿಳಿಸಿದರು.
You must be logged in to post a comment Login