Connect with us

LATEST NEWS

ನಾಪತ್ತೆಯಾಗಿದ್ದ ಇಂಜಿನಿಯರಿಂಗ್ ವಿಧ್ಯಾರ್ಥಿ ಕೇರಳದ ಕೊಚ್ಚಿನ್ ನಲ್ಲಿ ಪತ್ತೆ

ನಾಪತ್ತೆಯಾಗಿದ್ದ ಇಂಜಿನಿಯರಿಂಗ್ ವಿಧ್ಯಾರ್ಥಿ ಕೇರಳದ ಕೊಚ್ಚಿನ್ ನಲ್ಲಿ ಪತ್ತೆ

ಮಂಗಳೂರು ಡಿಸೆಂಬರ್ 2: ನಿಗೂಢ ಕಣ್ಮರೆಯಾಗಿದ್ದ ಮಾಜಿ ಪಿಎಸ್ ಐ ಮದನ್ ಆಪ್ತ ಇಂಜಿನಿಯರಿಂಗ್ ವಿಧ್ಯಾರ್ಥಿ ವಿನಾಯಕ್ ಪತ್ತೆಯಾಗಿದ್ದಾನೆ. ಕೇರಳದ ಕೊಚ್ಚಿನ್ ನಲ್ಲಿದ್ದ ವಿನಾಯಕನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಶಕ್ತಿ ನಗರದ ಆಟೋ ಚಾಲಕ ಶಿವಕುಮಾರ್ ಮತ್ತು ಸಾಕಮ್ಮ ದಂಪತಿಯ ಪುತ್ರ ವಿನಾಯಕ್ ನವೆಂಬರ್ 8 ರಂದು ನಾಪತ್ತೆಯಾಗಿದ್ದು, ನವೆಂಬರ್ 15 ರಂದು ಮಾಜಿ ಪಿಎಸ್ ಐ ಮದನ್ ಅವರು ವಿನಾಯಕ್ ಪೋಷಕರಿಗೆ ಕರೆಮಾಡಿ ಈ ವಿಚಾರ ತಿಳಿಸಿದ್ದಾರೆ.

ಈ ನಡುವೆ ಮಾಜಿ ಪೊಲೀಸ್ ಅಧಿಕಾರಿ ಮದನ್ ಅವರೇ ತನ್ನ ಮಗನ ನಾಪತ್ತೆಗೆ ಕಾರಣ ಎಂದು ವಿನಾಯಕ್ ಪೊಲೀಸರು ಆರೋಪಿಸಿ ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷವಹಿಸಿದ್ದಾರೆ ಎಂದ ಆರೋಪಿಸಿ ಪೋಷಕರು ತನ್ನ ಮಗನನ್ನು ಹುಡುಕಿ ತರುವಂತೆ ಹೈಕೋರ್ಟಿಗೆ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಹಾಕಿದ್ದರು.

ಹೈಕೋರ್ಟ್ ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರಿಂದ ಚುರುಕಾದ ಉರ್ವಾ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದರು. ಈಗ ನಾಪತ್ತೆಯಾಗಿದ್ದ ವಿನಾಯಕ್ ನನ್ನು ಕೇರಳದ ಕೊಚ್ಚಿನ್ ನಲ್ಲಿ ಪತ್ತೆ ಹಚ್ಚಲಾಗಿದೆ. ತನ್ನ ಹೆತ್ತವರ ಬಗ್ಗೆ ಬೇಸರಗೊಂಡು ಕೊಚ್ಚಿನ್ ಗೆ ತೆರಳಿದ್ದಾಗಿ ವಿನಾಯಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಹೇಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *