Connect with us

LATEST NEWS

ಹುಂಡಿಗಾಗಿ ಅರ್ಚಕರ ಕೊಲೆ – ಇದೊಂದು ಹೇಯ ಕೃತ್ಯ

ಉಡುಪಿ ಸೆಪ್ಟೆಂಬರ್ 11: ಮಂಡ್ಯ ಜಿಲ್ಲೆ ಅರ್ಕೇಶ್ವರ ದೇವಸ್ಥಾನ ದಲ್ಲಿ ಮೂವರ ಹತ್ಯೆ ಪ್ರಕರಣವನ್ನು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಂಡಿಸಿದ್ದಾರೆ. ಇದೊಂದು ಹೇಯ ಕೃತ್ಯವಾಗಿದ್ದು, ದುಷ್ಕರ್ಮಿಗಳು ಎಲ್ಲೇ ಅಡಗಿದ್ದರೂ ಅವರನ್ನು ಬಂಧಿಸಲಾಗುವುದು ಎಂದು ಕೋಟ ತಿಳಿಸಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅರ್ಘೇಶ್ವರ ದೇವಸ್ಥಾನದ ಇಬ್ಬರು ಕಾವಲುಗಾರರು, ಓರ್ವ ಅರ್ಚಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ದೇವಸ್ಥಾನದ ಹುಂಡಿ ದೋಚಿಕೊಂಡು ಹೋಗಿದ್ದಾರೆ. ಇದು ಅತ್ಯಂತ ಹೇಯ ಕೃತ್ಯವಾಗಿದ್ದು, ರಾಜ್ಯ ಸರ್ಕಾರ ಈ ಘಟನೆಯನ್ನು ಖಂಡಿಸುತ್ತೆ ಎಂದು ಹೇಳಿದರು.

ಈಗಾಗಲೇ ಗೃಹ ಸಚಿವರು ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಬಗ್ಗೆ ಭರವಸೆ ನೀಡಿದ್ದಾರೆ. ಸಿಎಂ ಯಡ್ಯೂರಪ್ಪ ಗಮನಕ್ಕೂ ವಿಚಾರ ಬಂದಿದ್ದು, ಸಂತ್ರಸ್ಥ ಕುಟುಂಬ ಗಳಿಗೆ ತಲಾ ಐದು ಲಕ್ಷ ಪರಿಹಾರ ನೀಡಲು ಹೇಳಿದ್ದಾರೆ. ಈ ಹಿನ್ನಲೆ ಮೃತ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದರು. ನಾಳೆ ಸ್ಥಳ ಕ್ಕೆ ಭೇಟಿ ನೀಡಿ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *