Connect with us

LATEST NEWS

ದುಷ್ಕರ್ಮಿಗಳಿಂದ ಸಚಿವ ಯು.ಟಿ ಖಾದರ್ ಪ್ಲೆಕ್ಸ್ ಗೆ ಹಾನಿ

ದುಷ್ಕರ್ಮಿಗಳಿಂದ ಸಚಿವ ಯು.ಟಿ ಖಾದರ್ ಪ್ಲೆಕ್ಸ್ ಗೆ ಹಾನಿ

ಮಂಗಳೂರು ಸೆಪ್ಟೆಂಬರ್ 14: ಕುತ್ತಾರ್ ಪಂಡಿತ್ ಹೌಸ್ ಬಳಿ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಪ್ಲೆಕ್ಸ್ ಗೆ ಹಾನಿಯುಂಟು ಮಾಡಿರುವ ಘಟನೆ ನಡೆದಿದೆ.

ನಗರ ಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಚೆಂಬುಗುಡ್ಡೆ ವಾರ್ಡ್‍ನಲ್ಲಿ ಕಾಂಗ್ರೆಸಿಂದ ಗೆದ್ದ ಸದಸ್ಯೆ ರಕ್ಷಿತಾ ಅವರಿಗೆ ಅಭಿನಂದನೆ ಕೋರಿ ಕಾರ್ಯಕರ್ತರು ದೊಡ್ಡ ಪ್ಲೆಕ್ಸ್ ಹಾಕಿದ್ದರು. ಈ ಪ್ಲೆಕ್ಸ್ ನಲ್ಲಿ ಶಾಸಕ ಹಾಗೂ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಫೋಟೊವನ್ನು ಹಾಕಲಾಗಿತ್ತು. ಆದರೆ ಇದರಲ್ಲಿ ನೂತನ ನಗರಸಭಾ ಸದಸ್ಯೆ ರಕ್ಷಿತಾ ಫೋಟೊಗೆ ಏನೂ ಹಾನಿ ಮಾಡದ ದುಷ್ಕರ್ಮಿಗಳು ಕೇವಲ ಸಚಿವ ಖಾದರ್ ಭಾವಚಿತ್ರವನ್ನು ಹರಿದು ಹಾಕಿದ್ದಾರೆ.

ಈ ಪ್ಲೆಕ್ಸ್ ನ ಪಕ್ಕದಲ್ಲೇ ನಗರ ಅಪರಾಧ  ಗುಪ್ತವಾರ್ತೆ ವಿಭಾಗದ ಪೊಲೀಸ್ ಚಂದ್ರಶೇಖರ ಅವರಿಗೆ ಅಭಿನಂದನೆ ಕೋರಿ ದೊಡ್ಡ ಪ್ಲೆಕ್ಸ್ ಹಾಕಿದ್ದಾರೆ. ಅವರಿಗೆ ಇತ್ತೀಚೆಗೆ ಮುಖ್ಯಮಂತ್ರಿ ಪದಕ ಲಭಿಸಿತ್ತು. ಆದರೆ  ಈ ಪ್ಲೆಕ್ಸ್ ಗೆ ಯಾವುದೇ ಹಾನಿಯಾಗಿಲ್ಲ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *