LATEST NEWS
ಕಾಂಗ್ರೇಸ್ ಜೆಡಿಎಸ್ ಮೈತ್ರಿ ಲೋಕಸಭಾ ಚುನಾವಣೆ ಎದುರಿಸಿದ್ರೆ 25 ಸ್ಥಾನ ಖಚಿತ – ಸಚಿವ ಪುಟ್ಟರಾಜು
ಕಾಂಗ್ರೇಸ್ ಜೆಡಿಎಸ್ ಮೈತ್ರಿ ಲೋಕಸಭಾ ಚುನಾವಣೆ ಎದುರಿಸಿದ್ರೆ 25 ಸ್ಥಾನ ಖಚಿತ – ಸಚಿವ ಪುಟ್ಟರಾಜು
ಉಡುಪಿ ಸೆಪ್ಟೆಂಬರ್ 14: ಮಂಡ್ಯದ ಜೆಡಿಎಸ್ ಶಾಸಕರುಗಳು ಮುಖ್ಯಮಂತ್ರಿ ಕುಮಾರ್ ಸ್ವಾಮಿಯವರ ಬಾಡಿಗಾರ್ಡ್ ಗಳು, ಬಿಜೆಪಿಯವರಿಗೆ ನಮ್ಮ ಶರ್ಟ್ ಕೂಡ ಮುಟ್ಟಲು ತಾಕತ್ ಇದ್ಯಾ ಎಂದು ಸಣ್ಣ ನಿರಾವರಿ ಖಾತೆ ಸಚಿವ ಪುಟ್ಟರಾಜು ಉಡುಪಿಯಲ್ಲಿ ಗುಡುಗಿದ್ದಾರೆ.
ಉಡುಪಿ ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬೆನ್ನಿಗೆ ಬೆನ್ನಾಗಿ ನಾವು ನಿಂತಿದ್ದೇವೆ. ಮಂಡ್ಯದ ಶಾಸಕರು ಸಿಎಂಗೆ ಬಾಡಿಗಾರ್ಡ್ ಗಳು. ದುಡ್ಡಿಂದ ಆಗ್ಲಿ, ದರ್ಪದಿಂದ ಆಗ್ಲಿ ನಮ್ಮನ್ನು ಯಾರಿಂದಲೂ ಮುಟ್ಟೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದರೆ 25 ಸ್ಥಾನ ಗೆಲ್ಲುತ್ತೇವೆ. ಬಿಜೆಪಿಯವರ ಬಣ್ಣ ಬಯಲು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ.
ನಮ್ಮ ಸರ್ಕಾರವನ್ನು ಐದು ವರ್ಷ ಸುಭದ್ರ ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದ ಹೇಳಿದ ಅವರು, ಪ್ರಧಾನಿ ಮೋದಿ ಉದ್ದುದ್ದ ಭಾಷಣ ಮಾಡ್ತಾರೆ ಆದ್ರೆ ಅವರ ಜನ ಕ್ಲಬ್ ನಲ್ಲಿ ದಂಧೆ ಮಾಡುವವರ ದುಡ್ಡು ಪಡೆಯುತ್ತಾರೆ ಎಂದು ದೂರಿದರು.
You must be logged in to post a comment Login