LATEST NEWS
ರಾಮಮಂದಿರ ಬಳಿಕ ಮಥುರಾ,ಕಾಶಿ ವಿಶ್ವನಾಥ ಮಂದಿರಗಳ ಬಿಡುಗಡೆ ಆಗಬೇಕು : ಗೋ ಮಧುಸೂಧನ್
ರಾಮಮಂದಿರ ಬಳಿಕ ಮಥುರಾ,ಕಾಶಿ ವಿಶ್ವನಾಥ ಮಂದಿರಗಳ ಬಿಡುಗಡೆ ಆಗಬೇಕು : ಗೋ ಮಧುಸೂಧನ್
ಉಡುಪಿ, ನವೆಂಬರ್ 28 : ಅಯೋದ್ಯೆಯಲ್ಲಿ ಈ ಬಾರಿ ಭವ್ಯ ರಾಮಮಂದಿರ ನಿರ್ಮಾಣವಾಗಲೇ ಬೇಕೆಂದು ಇಡೀ ದೇಶವೇ ಈ ಬಗ್ಗೆ ಸಂಕಲ್ಪ ಮಾಡಿದೆ. ಆದರೆ ಇದರೊಟ್ಟಿಗೆ ಮಥುರಾ, ಕಾಶಿ ವಿಶ್ವನಾಥ ಮಂದಿರಗಳ ಬಿಡುಗಡೆ ಆಗಬೇಕಿದೆ ಎಂದು ಬಿಜೆಪಿ ಮಾಜಿ ಶಾಸಕ ಗೋ ಮಧುಸೂಧನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಪರ್ಯಾಯ ಪೀಠಾಧೀಶ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರ ಮಹತ್ವಾಕಾಂಕ್ಷಿ ಯೋಜನೆಯಾದ ಉಡುಪಿ ಶ್ರೀಕೃಷ್ಣ ಮಠದ ಗರ್ಭ ಗುಡಿಗೆ ಚಿನ್ನದ ಹೊದಿಸುವ ಕಾರ್ಯದ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಶ್ರೀ ರಾಮನಿಗೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಈ ಬಾರಿ ಮುಂದಾಗಬೇಕೆಂದು ಸಾಧುಸಂತರು, ದೇಶದ ಕೋಟ್ಯಾಂತರ ಜನ ಪ್ರಧಾನಿಗೆ ಕರೆ ಕೊಟ್ಟಿದ್ದಾರೆ. ಪಹೆಲೆ ಮಂದಿರ್ ಬಾದ್ ಮೆ ಎಲೆಕ್ಷನ್ ( ಮಂದಿರ ಮೊದಲು ಚುನಾವಣೆ ಮತ್ತೆ ) ಎಂದು ಕರೆ ಕೂಡ ನೀಡಿದ್ದಾರೆ
ರಾಮ ಮಂದಿರ ವಿಚಾರದಲ್ಲಿ ದೇಶದಾದ್ಯಂತ ದೊಡ್ಡ ಚರ್ಚೆ ನಡೆಯುತ್ತಿದೆ.
ಬಾಬರ್ ನ ಮಸೀದಿ ಪರ ನಿಂತವರಿಗೆ ಈಗ ಹೆದರಿಕೆ ಆರಂಭವಾಗಿದೆ. ಶ್ರೀ ಕೃಷ್ಣನ ಜನ್ಮಸ್ಥಾನಕ್ಕೆ , ಕಾಶಿ ವಿಶ್ವನಾಥ ಮಂದಿರಕ್ಕೂ ಕೈ ಹಾಕುತ್ತಾರೆಂಬ ಅತಂಕ ಅವರಿಗಿದೆ.
ಈ ಮೂರು ದೇವಾಲಯಗಳು ನಮಗೆ ಬೇಕೆ ಬೇಕು. ಶ್ರೀ ರಾಮಮಂದಿರದ ಶಿಲಾನ್ಯಾಸದ ಜೊತೆ ಇದೆರಡು ಬಿಡುಗಡೆ ಆಗಬೇಕು. ಕೃಷ್ಣ ಹುಟ್ಟಿದ ಮಥುರಾದಲ್ಲಿ ಜೌರಂಗಜೇಬ್ ಮಸೀದಿ ಕಟ್ಟಿಸಿದ.
ಕಾಶಿ ವಿಶ್ವನಾಥ ಮಂದಿರದಲ್ಲಿಯೂ ಮಸೀದಿ ಕಟ್ಟಿಸಿದ. ಈ ಎರಡು ಮಸೀದಿಗಳೂ ಹೋಗಬೇಕಾಗಿದೆ ಶ್ರೀ ರಾಮನ ಭವ್ಯ ಮಂದಿರದ ಬಳಿಕ ಮಥುರಾ, ಕಾಶಿ ವಿಶ್ವನಾಥ ಮಂದಿರಗಳ ಬಿಡುಗಡೆ ಆಗಬೇಕಿದೆ ಎಂದು ಹೇಳಿದ್ದಾರೆ.
You must be logged in to post a comment Login