Connect with us

    LATEST NEWS

    ಮಂಗಳೂರು : ಕಿಲ್ಲರ್ ಡೆಂಗ್ಯೂಗೆ ವಿದ್ಯಾರ್ಥಿ ಬಲಿ, ಮಕಡೆ ಮಲಗಿದ ಪಾಲಿಕೆ..!

    ಮಂಗಳೂರು ನಗರದಲ್ಲಿ ಕಿಲ್ಲರ್ ಡೆಂಗ್ಯೂ 8 ನೇ ತರಗತಿಯ ವಿದ್ಯಾರ್ಥಿಯೋರ್ವನನ್ನು ಬಲಿ ಪಡೆದಿದೆ.

    ಮಂಗಳೂರು: ಮಂಗಳೂರು ನಗರದಲ್ಲಿ ಕಿಲ್ಲರ್ ಡೆಂಗ್ಯೂ 8 ನೇ ತರಗತಿಯ ವಿದ್ಯಾರ್ಥಿಯೋರ್ವನನ್ನು ಬಲಿ ಪಡೆದಿದೆ.

     

    ನಗರದ ಅತ್ತಾವರ ಏಳನೇ ಕ್ರಾಸ್ ರಸ್ತೆಯ ನಿವಾಸಿಯಾಗಿರುವ ಸೋನಿ ಮತ್ತು ಆಲ್ಫೋನ್ಸ್ ಅವರ ಪುತ್ರ ಆಶೀಶ್ ಡಿಸೋಜಾ(13) ಡೆಂಗ್ಯೂ ಗೆ ಬಲಿಯಾದ ವಿದ್ಯಾರ್ಥಿಯಾಗಿದ್ದಾನೆ.ತೀವ್ರ ಜ್ವರದಿಂದ ಬಳಲುತ್ತಿದ್ದ ಸೋನಿ ಮತ್ತು ಆಲ್ಫೋನ್ಸ್ ರ ಇಬ್ಬರು ಪುತ್ರರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಈ ಪೈಕಿ 13ರ ಹರೆಯದ ಆಶೀಶ್ ಸೋಮವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಶಿಶ್ ನ ಅಣ್ಣ ಡಿಸ್ಚಾರ್ಜ್ ಮಾಡಲಾಗಿದೆ. ಆಶೀಶ್ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಸದಾ ಚುರುಕುತನದಿಂದಿದ್ದ ಆಶಿಶ್ ಇಗರ್ಜಿಯ ಬಲಿಪೀಠ ಸೇವಾ ಸಂಘದ ಸಕ್ರೀಯ ಸದಸ್ಯನಾಗಿದ್ದ ಎನ್ನಲಾಗಿದೆ. ಅತ್ತಾವರ ಸಹಿತ ನಗರದ ಅನೇಕ ಕಡೆ ಡೆಂಗ್ಯೂ, ಇತರ ಸಾಂಕ್ರಾಮಿಕ ರೋಗಗಳು ತೀವ್ರ ಉಲ್ಭಣ ಸ್ಥಿತಿಯಲ್ಲಿದ್ದರೂ ಪಾಲಿಕೆ ಆರೋಗ್ಯಾಧಿಕಾರಿಗಳು ಮಕಡೆ ಮಲಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply