MANGALORE
ಮಂಗಳೂರು : ಶನಿವಾರ ಶ್ರೀ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಪುರಪ್ರವೇಶ
ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರಾಲಿ ಶ್ರೀ ಚಿತ್ರಾಪುರ ಮಠ ಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ 28ನೇ ವರ್ಷದ
ಚಾತುರ್ಮಾಸ ವೃತದ ಆಚರಣೆಯನ್ನು ಈ ಬಾರಿ ಮಂಗಳೂರಿನ ರಥಬೀದಿ ಬಳಿ ಇರುವ ಶ್ರೀ ವಾಮನಾಶ್ರಮ ಸಮಾಧಿ ಮಠದಲ್ಲಿ ಕೈಗೊಳ್ಳಲಿರುವರು.
ಈ ಹಿನ್ನೆಲೆಯಲ್ಲಿ ಜುಲೈ 20 ರಂದು ಶನಿವಾರ ಸಂಜೆ 6-00 ಗಂಟೆಗೆ ಶ್ರೀಗಳ ಪುರಪ್ರವೇಶ ಮೆರವಣಿಗೆಯು ರಥಬೀದಿಯ ಬಾಲಾಜಿ ಜಂಕ್ಷನ್ (ವೃತ್ತ) ನಿಂದ ಆರಂಭವಾಗಿ ಶ್ರೀ ವಾಮನಾಶ್ರಮ ಮಠದವರೆಗೆ ಸಾಗಿ ಸಂಪನ್ನಗೊಳ್ಳುವುದು ಎಂದು ಕೊಡಿಯಾಲ್ ಚಾತುರ್ಮಾಸದ ಕಮಿಟಿಯ ಸಂಚಾಲಕರಾದ ಎಲ್ಲೂರು ರಾಮಕಿಶೋರ್ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
You must be logged in to post a comment Login