MANGALORE
ಮಂಗಳೂರು ಫಿಸಿಯೋಕಾನ್ 2023 – ಕೆನರಾ ವಿಕಾಸ್ ಕಾಲೇಜ್ ಆಫ್ ಫಿಸಿಯೋಥೆರಪಿಯಲ್ಲಿ ಪೂರ್ವಭಾವಿ ಕಾರ್ಯಾಗಾರ
ಮಂಗಳೂರು ಸೆಪ್ಟೆಂಬರ್ 7- ಕೆನರಾ ವಿಕಾಸ್ ಕಾಲೇಜ್ ಆಫ್ ಫಿಸಿಯೋಥೆರಪಿಯಲ್ಲಿ ಪೂರ್ವಭಾವಿ ಸಮ್ಮೇಳನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ ವೇದವ್ಯಾಸ್ ಕಾಮತ್ ಅವರು ಫಿಸಿಯೋಥೆರಪಿಯ ಮಹತ್ವದ ಬಗ್ಗೆ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಕ್ರೀಡಾ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ತಿಳಿಸಿದರು. ಕ್ರೀಡಾಪಟುಗಳಿಗೆ ಮಂಗಳೂರಿನಲ್ಲಿ ಫಿಸಿಯೋಥೆರಪಿ ಸೇರಿದಂತೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಕೆನರಾ ಪ್ರೌಢಶಾಲಾ ಸಂಘದ ಉಪಾಧ್ಯಕ್ಷರಾದ ಶ್ರೀ ಎಂ ಪದ್ಮನಾಭ ಪೈ ಅಧ್ಯಕ್ಷತೆ ವಹಿಸಿ ಮುಖ್ಯ ಭಾಷಣ ಮಾಡಿದ ಅವರು, ಯಾವುದೇ ವೃತ್ತಿಯಲ್ಲಿದ್ದರೂ ಉತ್ತಮ ಚಾರಿತ್ರ್ಯವನ್ನು ಹೊಂದುವುದರ ಮಹತ್ವ ಮತ್ತು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಚೌಕಟ್ಟಿನ ಹೊರಗೆ ಯೋಚಿಸುವ ಮಹತ್ವವನ್ನು ತಿಳಿಸಿದರು.
ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಕ್ರೀಡಾ ಫಿಸಿಯೋಥೆರ್ಪಿಸ್ಟ್ ಡಾ ಸುಮಿತಾ ಜೈನ್ ಅವರು ಕಾರ್ಯಾಗಾರದ ಗೌರವಾನ್ವಿತ ಅತಿಥಿಯಾಗಿದ್ದರು. ಅವರು ಕಾರ್ಯಾಗಾರದ ಮಹತ್ವದ ಬಗ್ಗೆ ಹಂಚಿಕೊಂಡರು ಮತ್ತು ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಎಲೈಟ್ ಅಥ್ಲೀಟ್ಗಳಿಗೆ ಚಿಕಿತ್ಸೆ ನೀಡುವಾಗ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು. ಆಡಳಿತ ಮಂಡಳಿ ಸದಸ್ಯ, ಕೆನರಾ ವಿಕಾಸ ಸಮೂಹ ಸಂಸ್ಥೆಗಳ ಸಂಯೋಜಕ ಶ್ರೀ ಬಸ್ತಿ ಪುರುಷೋತ್ತಮ ಶೆಣೈ ಅವರು ಭೌತಚಿಕಿತ್ಸೆಯ ಮಹತ್ವದ ಕುರಿತು ಮಾತನಾಡಿ, ಭೌತಚಿಕಿತ್ಸೆಯ ಕುರಿತು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು.
ಮಯೋಫಾಸಿಯಲ್ ಡಿಸ್ಫಂಕ್ಷನ್ನ ಮೌಲ್ಯಮಾಪನ ಮತ್ತು ನಿರ್ವಹಣೆ ವಿಷಯದ ಪೂರ್ವ ಸಮ್ಮೇಳನದ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಪ್ರಭುರಾಜ ಜಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ಕಾರ್ಯಾಗಾರವನ್ನು ನಡೆಸಿಕೊಟ್ಟರು . ಕೆನರಾ ವಿಕಾಸ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ನಿತಿನ್ ಚಂದ್ರ ಕಿಣಿ ಎಲ್ಲರಿಗೂ ವಿಶೇಷವಾಗಿ ನಿರಂತರ ಮಾರ್ಗದರ್ಶನ ಮತ್ತು ಬೆಂಬಲ ನೀಡಿದ ಮಂಗಳೂರು ಫಿಸಿಯೋಕಾನ್ 2023ರ ಸಂಘಟನಾ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ಹಾಗೂ ನೆರೆದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಕೆನರಾ ವಿಕಾಸ್ ಕಾಲೇಜಿನ ಕ್ಯಾಂಪಸ್ ಸಂಯೋಜಕರಾದ ಶ್ರೀ ಯುತ ಪಾರ್ಥಸಾರಥಿ.ಜೆ ಪಾಲೆಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ. ವೇನೇಸ್ಸಾ ಸೇರಾವೋ ನಿರೂಪಣೆಗೈದರು.
You must be logged in to post a comment Login