LATEST NEWS
50 ಪೌರ ನೌಕರರಿಗೆ ನೇರ ಪಾವತಿಯ ಆದೇಶ ಪತ್ರ ಹಸ್ತಾಂತರಿಸಿದ ಮಂಗಳೂರು ಮೇಯರ್
ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ 50 ಹೊರ ಗುತ್ತಿಗೆಯ ಪೌರ ಕಾರ್ಮಿಕರಿಗೆ ನೇರ ಪಾವತಿಯ ಆದೇಶ ಪತ್ರವನ್ನು ಮೇಯರ್ ಸುಧೀರ್ ಶೆಟ್ಟಿ ವಿತರಿಸಿದರು.
ಮಂಗಳೂರು ಮಹಾನಗರಪಾಲಿಕೆಯ ಪರಿಷತ್ತು ಸಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಹೊರ ಗುತ್ತಿಗೆ ನೌಕರರನ್ನು ಆಯ್ಕೆ ಮಾಡಿ ಪ್ರಥಮ ಹಂತದಲ್ಲಿ ಸುಮಾರು 50 ನೌಕರರಿಗೆ ನೇರ ಪಾವತಿಯ ಆದೇಶ ಪತ್ರವನ್ನು ಪಾಲಿಕೆಯ ಮಂಗಳ ಸಭಾಂಗಣದಲ್ಲಿ ವಿತರಿಸಲಾಯಿತು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಪಾಲಿಕೆಯ ಆಯುಕ್ತರಾದ ಆನಂದ್ ಸಿ.ಎಲ್, ಉಪಮೇಯರ್ ಸುನೀತ, ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಾದ ವರುಣ್ ಚೌಟ, ಭರತ್ ಕುಮಾರ್, ಲೋಹಿತ್ ಅಮೀನ್, ಪಾಲಿಕೆಯ ಅಧಿಕಾರಿಗಳು ಮತ್ತು ಪೌರಕಾಮಿ೯ಕ ನೌಕರರು ಉಪಸ್ಥಿತರಿದ್ದರು.
You must be logged in to post a comment Login