LATEST NEWS
ಬಡಪಾಯಿಗಳ ಮೇಲೆ ಕರಾಟೆ ಪ್ರಯೋಗಿಸಿದ ಮಂಗಳೂರು ಮೇಯರ್ ಕವಿತಾ ಸನಿಲ್
ಬಡಪಾಯಿಗಳ ಮೇಲೆ ಕರಾಟೆ ಪ್ರಯೋಗಿಸಿದ ಮಂಗಳೂರು ಮೇಯರ್ ಕವಿತಾ ಸನಿಲ್
ಮಂಗಳೂರು ಅಕ್ಟೋಬರ್ 27: ಮಂಗಳೂರು ಮೇಯರ್ ಕವಿತಾ ಸನಿಲ್ ತಾವು ವಾಸಿಸುವ ಫ್ಲ್ಯಾಟ್ ನ ವಾಚ್ ಮೆನ್ ಕುಟುಂಬದ ಮೇಲೆ ಕರಾಟೆ ಪ್ರಯೋಗ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕಳೆದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಮೇಯರ್ ಕವಿತಾ ಸನಿಲ್ ಫ್ಲ್ಯಾಟ್ ನ ವಾಚ ಮೆನ್ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಪೋಸ್ಟ್ ಕಾರ್ಡ್ ಕನ್ನಡ. ಕಾಮ್ ವರದಿ ಮಾಡಿದೆ.
ಪಟಾಕಿ ಹೊಡೆಯುವ ವಿಚಾರದಲ್ಲಿ ಮಕ್ಕಳ ಜಗಳದಲ್ಲಿ ಮದ್ಯಪ್ರವೇಶಿಸಿದ ಮೇಯರ್ ಕವಿತಾ ಸನಿಲ್ ಫ್ಲ್ಯಾಟ್ ನ ವಾಚ್ ಮೆನ್ ನ ಆರು ವರ್ಷದ ಮಗಳನ್ನು ಎತ್ತಿ ಬಿಸಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ ಅದನ್ನು ತಡೆಯಲು ಬಂದ ವಾಚ್ ಮೆನ್ ಕುಟುಂಬದವರ ಮೇಲೂ ಮೇಯರ್ ಕವಿತಾ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ . ಅದಲ್ಲದೆ ವಾಚ್ ಮೆನ್ ಕುಟುಂಬಕ್ಕೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಪೋಸ್ಟ್ ಕಾರ್ಡ್ ಕನ್ನಡ. ಕಾಮ್ ವರದಿ ಮಾಡಿದೆ.
ಮಕ್ಕಳ ಕ್ಷುಲ್ಲಕ ಜಗಳದಲ್ಲಿ ಮೇಯರ್ ಕವಿತಾ ಸನಿಲ್ ತಾವು ಕಲಿತ ಕರಾಟೆಯ ಕಿಕ್ಕ್ ಹಾಗು ಚೋಕ್ ಗಳನ್ನು ಪ್ರಯೋಗಿಸಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೇಯರ್ ಅವರ ದರ್ಪ ಅಮಾಯಕ ಕುಟುಂಬದ ಮೇಲೆ ತೋರಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ.
You must be logged in to post a comment Login