LATEST NEWS
ಮಂಗಳೂರು ಜೈಲಿನಲ್ಲಿ ಪೋಕ್ಸೋ ಪ್ರಕರಣ ಖೈದಿಯ ಕೊಲೆಯತ್ನ

ಮಂಗಳೂರು ಜೈಲಿನಲ್ಲಿ ಪೋಕ್ಸೋ ಪ್ರಕರಣ ಖೈದಿಯ ಕೊಲೆಯತ್ನ
ಮಂಗಳೂರು ಮಾರ್ಚ್ 7: ಮಂಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ ಕೈದಿಯೊಬ್ಬನಿಗೆ ಚಾಕುವಿನಿಂದ ತಿವಿದು ಕೊಲೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಖೈದಿಯ ಮೇಲೆ ಕಾರಾಗೃಹದ ಸಹ ಖೈದಿಗಳು ಕೊಲೆಯತ್ನ ನಡೆಸಿದ್ದಾರೆ. ಹಲ್ಲೆ ಹಿನ್ನಲೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಖೈದಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆಗೊಳಗಾದ ಖೈದಿ ಪೋಕ್ಸೊ ಪ್ರಕರಣದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿತನಾಗಿದ್ದ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಏಕಾಎಕಿ ಇತರ ಕೈದಿಗಳು ಇತನ ಮೇಲೆ ದಾಳಿ ನಡೆಸಿದ್ದು, ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭ ಜೈಲಿನ ಪೊಲೀಸರ ಮಧ್ಯಪ್ರವೇಶದಿಂದ ಖೈದಿ ಪಾರಾಗಿದ್ದು, ಚಾಕುವಿನಿಂದ ಹಲ್ಲೆಮಾಡಿರುವ ಹಿನ್ನಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚೆಗಷ್ಟೇ ನೂತನ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಜೈಲಿಗೆ ದಾಳಿ ನಡೆಸಿ, ಮೊಬೈಲ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಆದರೂ ಮತ್ತೆ ಜೈಲಿನಲ್ಲಿ ಖೈದಿಗಳ ಮಾರಾಮಾರಿ ಮುಂದುವರೆದಿದೆ.