Connect with us

LATEST NEWS

ಮಕ್ಕಳಿಗೆ ಹೀಗೆ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ ಎಂದ್ರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಮಂಗಳೂರು ಜುಲೈ 20: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ನಿನ್ನೆ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅವರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಸ್ಥಿತಿ ಅವಲೋಕನ ನಡೆಸಿದ್ದರು. ಈ ವೇಳೆ ಅಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಹೀಗೆ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ ಎಂದು ಹೇಳಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ.


ಪಾಣೆಮಂಗಳೂರು ಅಲಡ್ಕ ಪರಿಸರದ ನೆರೆ ಪರಿಸ್ತಿತಿ ಪರಿಶೀಲನೆ ನೇಳೆ ಅಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಜಿಲ್ಲಾಧಿಕಾರಿ ನೀವು ಹೀಗೆ ಓಡಾಡಿಕೊಂಡಿದ್ದರೆ ನಾನು ರಜೆ ಕೊಡುವುದಿಲ್ಲ ಎಂದು ತಮಾಷೆ ಮಾಡಿದರು. ಅದಕ್ಕೆ ಮಕ್ಕಳು ನಾಳೆ ರಜೆ ಕೋಡಿ ಸರ್ ಮನೆಯಲ್ಲಿ ಇರುತ್ತೇವೆ ಎಂದು ಮಕ್ಕಳು ಜಿಲ್ಲಾಧಿಕಾರಿ ಉತ್ತರ ಕೊಟ್ಟಿದ್ದಾರೆ. ಮಕ್ಕಳ ಮಾತು ಹಾಗೂ ಜಿಲ್ಲಾಧಿಕಾರಿಯವರ ಪ್ರಶ್ನೆಗೆ ಎಲ್ಲರಲ್ಲೂ ನಗು ಮೂಡಿಸಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *