Connect with us

KARNATAKA

ಮಂಡ್ಯ ದಲ್ಲಿ ರೈಲಿನಡಿ ಸಿಲುಕಿ ರಮ್ಯಾ ದಾರುಣ ಅಂತ್ಯ..!

ಮಂಡ್ಯ :  ಗೋಲ್ಡ್ ಮೆಡಲ್ ಪದವೀಧರೆ ರೈಲಿನಡಿ ಸಿಲುಕಿ ಸಾವನ್ನಪ್ಪಿದ  ದಾರುಣ ಘಟನೆ ಮಂಡ್ಯ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದೆ.

ಇಲ್ಲಿನ ಸ್ವರ್ಣಸಂದ್ರ ಬಡಾವಣೆಯ ರಮ್ಯಾ (24)ಮೃತ ಯುವತಿಯಾಗಿದ್ದಾರೆ.  ರೈಲು ನಿಲ್ದಾಣದ ರೈಲ್ವೆ ಮೇಲ್ಸೇತುವೆ ಬಳಿ ಹಳಿ ದಾಟುವ ವೇಳೆ  ಈ ದುರ್ಘಟನೆ ಸಂಭವಿಸಿ  ಹಂಪಿ ಎಕ್ಸ್‌ಪ್ರೆಸ್‌ ರೈಲು ಯುವತಿ ಮೇಲೆ ಹಾದು ಹೋಗಿದೆ. ಬೆಂಗಳೂರಿನಿಂದ ಮೈಸೂರಿಗೆ ಈ ಹಂಪಿ ಎಕ್ಸ್‌ಪ್ರೆಸ್‌ ತೆರಳುತ್ತಿತ್ತು. ರೈಲಿಗೆ ಸಿಲುಕಿದ  ರಮ್ಯಳ ದೇಹ ಛಿದ್ರಗೊಂಡಿದೆ. ಎಂಕಾಂನಲ್ಲಿ ಚಿನ್ನದ ಪದಕ ಪಡೆದಿದ್ದ ರಮ್ಯಾ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದರು. ಸ್ಥಳಕ್ಕೆ ಮಂಡ್ಯ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Share Information

Continue Reading
Advertisement
Click to comment

Leave a Reply

Your email address will not be published. Required fields are marked *