Connect with us

KARNATAKA

ಮಂಡ್ಯ : ಗಂಡನ ಮನೆಯ ವರದಕ್ಷಿಣೆ ದಾಹ, ಡೆತ್‌ನೋಟ್‌ನಲ್ಲಿ ಅನುಭವಿಸಿದ ನರಕಯಾತನೆ ಬರೆದಿಟ್ಟು ಪ್ರೇಮ ಜೀವಾಂತ್ಯ ..!

ಮಂಡ್ಯ : 5 ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟ ಪ್ರೇಮಗಂಡನ ಮನೆಯಲ್ಲಿ ವರದಕ್ಷಿಣೆಗಾಗಿ ತಾನು ಅನುಭವಿಸಿದ ಆ ನೋವಿನ ಕರಾಳ ದಿನಗಳನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟು ಯುವ ಗೃಹಿಣಿ ನೇಣಿಗೆ ಶರಣಾದ ದಾರುಣ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.

ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದ 26 ವರ್ಷದ ಪ್ರೇಮಕುಮಾರಿ ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 2022ರಲ್ಲಿ ಮೈಸೂರಿನ ರಾಘವೇಂದ್ರ ಎಂಬುವವರನ್ನು ಪ್ರೇಮಕುಮಾರಿ ಮದುವೆಯಾಗಿದ್ದರು. ಪ್ರೇಮಕುಮಾರಿ ಕುಟುಂಬಸ್ಥರು ಮದುವೆ ಸಂದರ್ಭ 150 ಗ್ರಾಂ ಚಿನ್ನ ಹಾಗೂ 5 ಲಕ್ಷ ರೂ. ನಗದು ಹಣವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ಮದುವೆ ಆದ ಮೂರೇ ತಿಂಗಳಿಗೆ ರಾಘವೇಂದ್ರ ಕುಟುಂಬಸ್ಥರ ಅಸಲಿ ಆಟ ಶುರುವಾಗಿತ್ತು.

 

ಹೆಚ್ಚಿನ ವರದಕ್ಷಿಣೆ ತರುವಂತೆ ಪ್ರೇಮಕುಮಾರಿಗೆ ಒತ್ತಡ ಹಾಕಿದ್ದರು. ತವರಿಗೆ ಹೋಗಿ 64 ಲಕ್ಷ ರೂ ತೆಗೆದುಕೊಂಡು ಬಾ ಇಲ್ಲದಿದ್ದರೆ ಮನೆಯಲ್ಲಿ ಜಾಗವಿಲ್ಲ ಎಂದು ನಿರಂತರ ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ಪ್ರೇಮಕುಮಾರಿ ಸವಿವರವಾಗಿ ಡೆತ್ ನೋಟಲ್ಲಿ ಉಲ್ಲೇಖಿಸಿದ್ದಾರೆ. ಹಣ ತರುವಂತೆ ಪತಿ ಮನೆಯವರು ಒತ್ತಡ ಹೇರಿ ಪ್ರೇಮಕುಮಾರಿಯನ್ನು ತವರು ಮನೆಗೆ ಕಳಿಸಿದ್ದರು. ವಕೀಲೆಯಾಗುವ ಆಗುವ ಕನಸು ಕಂಡ ಪ್ರಂ ಕುಮಾರಿ ತವರು ಮನೆಯಲ್ಲೆ ಇದ್ದುಕೊಂಡೇ ವಿದ್ಯಾಭ್ಯಾಸ ಮುಂದುವರಿಸಿದ್ದಳು. ಇತ್ತೀಚಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲದಿದ್ದರಿಂದ ಕೊಲೆ ಮಾಡಿಸುವ ಬೆದರಿಕೆಯನ್ನೂ ಗಂಡನ ಮನೆಯವರು ಹಾಕಿದ್ದರು ಎನ್ನಲಾಗಿದೆ ನನ್ನ ಕನಸು ನಚ್ಚು ನೂರಾಗಿದೆ. ಇವರ ಕಾಟವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನಿತ್ಯವು ಭಯದಲ್ಲೇ ಜೀವನವನ್ನು ದೂಡುವಂತಾಗಿದೆ. ಒಳ್ಳೆಯವರಂತೆ ನಟಿಸಿ, ಮೋಸ ಮಾಡಿದ್ದಾರೆ. ಅವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಪ್ರೇಮಕುಮಾರಿ ಸಾಯುವ ಮುನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ.ಶ್ರೀಮಂತ ಮನೆ ಸೊಸೆಯಾದ ನನಗೆ ಸಾಯುವ ಧೈರ್ಯ ಇಲ್ಲ ಮತ್ತು ಬದುಕುವ ಆಸೆಯು ಇಲ್ಲ. ಗಂಡ ಬಿಟ್ಟವಳು, ಮಾರ್ಯಾದೆ ತೆಗೆಯುತ್ತಿದ್ದಾಳೆ ಎಂದು ಭಾವಿಸದೇ ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಪ್ರೇಮಕುಮಾರಿ ಸುಮಾರು 5 ಪುಟಗಳ ಡೆತ್‌ನೋಟ್ ಬರೆದಿಟ್ಟು, ಬುಧವಾರ ಸಂಜೆ ನೇಣಿಗೆ ಶರಣಾಗಿದ್ದಾಳೆ. ಕುಟುಂಬಸ್ಥರು ರಾಘವೇಂದ್ರ ಕುಟುಂಬಸ್ಥರ ವಿರುದ್ಧ ಕಿಕ್ಕೆರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *