LATEST NEWS
ಮರುವಾಯಿ ಹೆಕ್ಕಲು ಹೋಗಿ ಪಾಪನಾಶಿನಿ ನದಿಯಲ್ಲಿ ಮುಳುಗಿ ಯುವಕ ಸಾವು
ಉಡುಪಿ ಮಾರ್ಚ್ 15: ಪಿತ್ರೋಡಿ ಕಡವಿನ ಬಾಗಿಲು ಬಳಿ ನದಿಯಲ್ಲಿ ಮರುವಾಯಿ (ಕೊಯ್ಯೊಲ್) ಹೆಕ್ಕಲು ಹೋದ ಯುವಕನೋರ್ವ ಕಣ್ಮರೆಯಾದ ಈ ಘಟನೆ ನಡೆದಿದ್ದು ಯುವಕನಿಗಾಗಿ ನದಿಯಲ್ಲಿ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ.
ನೀರಿನಲ್ಲಿ ಮುಳುಗಿರುವ ಯುವಕ ಸುಮಂತ್ ಎಂದು ಗುರುತಿಸಲಾಗಿದ್ದು, ಈತ ತನ್ನಿಬ್ಬರು ಸ್ನೇಹಿತರ ಜೊತೆ ಉದ್ಯಾವರ ಪಿತ್ರೋಡಿಯ ನದಿಯಲ್ಲಿ ಮರುವಾಯಿ ಹೆಕ್ಕಲು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆಂದು ತಿಳಿದು ಬಂದಿದೆ.
ಇನ್ನು ರಕ್ಷಣೆ ಮಾಡಲು ಹೋಗಿದ್ದ ಸಂತೋಷ್ ಕೂಡ ನೀರಿನಲ್ಲಿ ಮುಳುಗಿ ಹೋಗುವ ಸಂದರ್ಭ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ನಾಪತ್ತೆಯಾಗಿರುವ ಯುವಕನ ಪತ್ತೆ ಕಾರ್ಯ ಮುಂದುವರೆದಿದೆ.
You must be logged in to post a comment Login