LATEST NEWS
ಜಿಲ್ಲೆಯಲ್ಲಿ ಮುಂದುವರಿದೆ ಆತ್ಮಹತ್ಯೆ ಸರಣಿ – ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಜಿಲ್ಲೆಯಲ್ಲಿ ಮುಂದುವರಿದೆ ಆತ್ಮಹತ್ಯೆ ಸರಣಿ – ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ
ಮಂಗಳೂರು ಅಕ್ಟೋಬರ್ 12: ವ್ಯಕ್ತಿಯೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ನಗರ ಹೊರವಲಯದ ನೇತ್ರಾವತಿ ಸೇತುವೆ ಮೇಲಿನಿಂದ ಅಪರಿಚಿತ ವ್ಯಕ್ತಿಯೊಬ್ಬ ನದಿಗೆ ಜಿಗಿದಿದ್ದಾನೆ. ತನ್ನ ವಾಚು, ಚಪ್ಪಲಿ, ಕನ್ನಡಕ, ಸೇತುವೆ ಮೇಲಿಟ್ಟ ವ್ಯಕ್ತಿ ನದಿಗೆ ಹಾರಿದ್ದಾನೆ. ದಾರಿಯಲ್ಲಿ ಸಾಗುವ ವಾಹನ ಚಾಲಕರು ವ್ಯಕ್ತಿಯನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಅಪರಿಚಿತ ವ್ಯಕ್ತಿ ನದಿಗೆ ದುಮುಕಿದ್ದಾನೆ. ಈ ಕುರಿತು ಉಳ್ಳಾಲ ಠಾಣೆಗೆ ಮಾಹಿತಿ ನೀಡಲಾಗಿದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ನದಿಗೆ ಧುಮುಕಿದ ವ್ಯಕ್ತಿಯ ಸುಳಿವು ಪತ್ತೆಯಾಗಿಲ್ಲ.
You must be logged in to post a comment Login