LATEST NEWS
ಕೇಂದ್ರ ಸರಕಾರದ ವಿರುದ್ದ ಸಿಪಿಐಎಂ ರಾಷ್ಟ್ರೀಯ ಜನಾಂದೋಲನ
ಕೇಂದ್ರ ಸರಕಾರದ ವಿರುದ್ದ ಸಿಪಿಐಎಂ ರಾಷ್ಟ್ರೀಯ ಜನಾಂದೋಲನ
ಮಂಗಳೂರು ಅಕ್ಟೋಬರ್ 12: ಕೇಂದ್ರ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಿಪಿಐಎಂ ರಾಷ್ಟ್ರೀಯ ಜನಾಂದೋಲನ ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ನಗರದಲ್ಲಿ ಸಭೆ ನಡೆಸಿದ ಸಿಪಿಐಎಂ ಮುಖಂಡರು ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರಕಾರದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಆದರೆ ಕೇಂದ್ರ ಸರಕಾರ ಭ್ರಷ್ಟಾಚಾರದಿಂದ ದೂರ ಉಳಿದಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕಪ್ಪು ಹಣವನ್ನು ಪೂರ್ಣವಾಗಿ ಹಿಂದೆ ತರುವೆನೆಂದು ಪ್ರಧಾನಿ ಅವರು ಕೊಟ್ಟ ಆಶ್ವಾಸನೆ ಸುಳ್ಳಾಗಿದೆ ಎಂದು ದೂರಿದ ಪ್ರತಿಭಟನಾಕಾರರು ಪನಾಮ ಪೇಪರ್ ಕೇಂದ್ರ ಸರಕಾರದ ಭ್ರಷ್ಟಾಚಾರ ಬಯಲು ಮಾಡಿದೆ ಎಂದು ಕಿಡಿಕಾರಿದ ಪ್ರತಿಭಟನಾಕಾರರು ಕೇಂದ್ರ ಸರಕಾರದ ಹಲವಾರು ಜನವಿರೋಧಿ ನೀತಿಗಳಿಂದ ಜನರು ತತ್ತರಿಸಿದ್ದಾರೆ ಎಂದು ದೂರಿದ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗಿದರು.
You must be logged in to post a comment Login