Connect with us

LATEST NEWS

16ರ ಬಾಲಕನ ಕೈಗೆ ಲಾರಿ ಕೊಟ್ಟು ಅಮಾಯಕ ತಂದೆ ಮಗನ ಜೀವ ತೆಗೆದ ಲಾರಿ ಡ್ರೈವರ್

ಉಡುಪಿ, ಸೆಪ್ಟೆಂಬರ್ 16: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ ಸಮೀಪ ನಡೆದ ಅಪಘಾತದಲ್ಲಿ ತಂದೆ ಮಗನ ಸಾವಿಗೆ ಕಾರಣವಾಗಿದ್ದ ಲಾರಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದೀಗ 16 ವರ್ಷ ಬಾಲಕನೊಬ್ಬ ಲಾರಿಯನ್ನು ಅಪಘಾತದ ಸಂದರ್ಭ ಚಲಾಯಿಸಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ, ಕಾಪು ಠಾಣೆಯ ಪೊಲೀಸರು ಇದೀಗ ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.


ಅಪಘಾತ ಸಂಭವಿಸುವ ಸಂದರ್ಭ ಲಾರಿ ಚಾಲಕನಾದ ಶೇಖರ್ ನಿದ್ದೆಯಲ್ಲಿ ಇದ್ದ ಎನ್ನಲಾಗಿದ್ದು, 16 ವರ್ಷದ ಬಾಲಕ ಲಾರಿ ಚಲಾಯಿಸುತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತವಾದ ಲಾರಿಯಲ್ಲಿ ಬಾಲಕ ಕ್ಲೀನರ್ ಆಗಿ ದುಡಿಯುತಿದ್ದು, ಹಲವಾರು ಬಾರಿ ಲಾರಿಯನ್ನು ಚಲಾಯಿಸಿದ್ದ ಎಂದು ತಿಳಿದು ಬಂದಿದೆ. ಈ ಅಪಘಾತಕ್ಕೆ ಮುನ್ನ ಬಾಲಕ ತನಗೆ ನಿದ್ದೆ ಬರುತ್ತಿದೆ ಎಂದು ಚಾಲಕನ ಬಳಿ ಹೇಳಿದ್ದಾನೆ ಎಂದು ವಿಚಾರಣೆಯ ವೇಳೆ ಪೊಲೀಸರ ಬಳಿ ಚಾಲಕ ಬಾಯಿ ಬಿಟ್ಟಿದ್ದಾನೆ.

ಇನ್ನು ಲಾರಿಯ ಚಾಲಕ ಶೇಖರ್ ನ ಡ್ರೈವಿಂಗ್ ಲೈಸನ್ಸ್ ಹಾಗೂ ಲಾರಿ ಏಜನ್ಸಿಯ ಪರವಾನಿಗೆ ರದ್ದತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಬೆಳಗಾವಿ ಮೂಲದ ಪ್ರಭಾಕರ್ ಕೋತ ಸ್ಥಳದಲ್ಲಿ ‌ಮೃತಪಟ್ಟರೆ, ಅವರ ಪುತ್ರ 14 ವರ್ಷದ ಸಮರ್ಥ್ ನಿನ್ನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಲಾರಿ ಚಾಲಕನ ಅಚಾತುರ್ಯಕ್ಕೆ ಅಪಾಯಕ ತಂದೆ ಮಗ ತಮ್ಮ ಪ್ರಾಣ ತೆತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *