LATEST NEWS
ಸಿಡಿಲ ಬಡಿತಕ್ಕೆ 4 ದನ ಸಾವು, ಹಲವರಿಗೆ ಗಾಯ
ಸಿಡಿಲ ಬಡಿತಕ್ಕೆ 4 ದನ ಸಾವು, ಹಲವರಿಗೆ ಗಾಯ
ಮಂಗಳೂರು ಸೆಪ್ಟೆಂಬರ್ 29: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸುರಿಯುತ್ತಿರುವ ಗುಡುಗು ಸಿಡಿಲು ಸಹಿತ ಮಳೆಗೆ 4 ಜಾನುವಾರುಗಳು ಮೃತಪಟ್ಟು, ಹಲವರಿಗೆ ಗಾಯಗಳಾಗಿವೆ.
ಪುತ್ತೂರು ತಾಲೂಕಿನ ಮಾಂತೂರಿನಲ್ಲಿ ಸಂಜೆ ಸುರಿದ ಭಾರಿ ಮಳೆ ಹಾಗೂ ಸಿಡಿಲಿಗೆ ಮೂರು ಮಂದಿಗೆ ಗಾಯವಾಗಿದೆ. ಸಂಜೆ ವೇಳೆ ಮನೆಗೆ ಬಡಿದ ಸಿಡಿಲಿಗೆ, ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಆದಂ,ಮರಿಯಮ್ಮ,ಮತ್ತು ಮಗಳಿಗೆ ಗಾಯವಾಗಿದೆ.
ಮೂಡಬಿದ್ರೆ ಯ ಪಡುಮಾರ್ನಾಡು ಎಂಬಲ್ಲಿ ಸಿಡಿಲಿಗೆ 4 ದನಗಳು ಬಲಿಯಾಗಿವೆ. ಕೊಟ್ಟಿಗೆಯಲ್ಲಿ ದನಗಳನ್ನು ಕಟ್ಟಿ ಹಾಕಲಾಗಿತ್ತು. ಸಿಡಿಲು ಕೊಟ್ಟಿಗೆ ಬಡಿದ ಹಿನ್ನಲೆಯಲ್ಲಿ 4 ದನಗಳು ಬಲಿಯಾಗಿವೆ.
ಪುತ್ತೂರಿನ ಕಾಣಿಯೂರು, ಚಾರ್ವಾಕ ಮತ್ತು ವೀರಮಂಗಲದಲ್ಲಿ ಕೂಡ ಸಿಡಿಲು ಅವಾಂತರ ಸೃಷ್ಠಿಸಿದೆ. ಸುಮಾರು ಐವರಿಗೆ ಸಣ್ಣ ಪುಟ್ಟ ಗಾಯಗಳಾದ ಬಗ್ಗೆ ವರದಿಯಾಗಿದೆ. ಚಾರ್ವಾಕದಲ್ಲಿ ಬೈಕ್ ನಲ್ಲಿ ಸಾಗುತ್ತಿರುವವರಿಗೆ ಸಿಡಿಲು ಬಡಿದಿದೆ. ಗಾಯಗೊಂಡವರು ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
You must be logged in to post a comment Login