Connect with us

    LATEST NEWS

    ಕಾರಿಂಜೇಶ್ವರ ಸನ್ನಿಧಿಯಲ್ಲಿ ಲಕ್ಷ ಹಣತೆಯ ವೈಭವದ ಲಕ್ಷದೀಪೋತ್ಸವ..!

    ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ಲಕ್ಷ ಹಣತೆಯೊಂದಿಗೆ ಲಕ್ಷದೀಪೋತ್ಸವ ನಡೆಯಿತು.

    ಕ್ಷೇತ್ರದಾದ್ಯಂತ ಅಯೋಧ್ಯೆ ರಾಮಮಂದಿರ, ಗಧೆ, ಶಂಖ, ಶಿವಲಿಂಗ, ಸ್ವಸ್ತಿಕ್ ಹೀಗೆ ವಿವಿಧ ವಿನ್ಯಾಸದಲ್ಲಿ ಕ್ಷೇತ್ರದಾದ್ಯಂತ ಹಣತೆಯಲ್ಲಿ ಶೃಂಗರಿಸಲಾಯಿತು. ಸಂಜೆ ಈಶ್ವರ ಸನ್ನಿಧಿಯಲ್ಲಿ ತುಲಾಭಾರ ಸೇವೆ, ರಂಗ ಪೂಜೆ ನಡೆಯಿತು.

    ರಾತ್ರಿ ಬಲ್ಲೋಡಿ ಗುತ್ತು ಮಾಗಣೆ ಗುತ್ತಿನಿಂದ ಸನ್ನಿಧಿಗೆ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಲಕ್ಷದೀಪೋತ್ಸವದ ನಿಮಿತ್ತ ಕಾರಿಂಜೇಶ್ವರ ದೇವರು ಪಾರ್ವತಿ ಸನ್ನಿಧಿಗೆ ಆಗಮನ, ಕೊಡಮಣಿತ್ತಾಯ ದೈವದ ನೇಮ, ಪಾರ್ವತಿ ಪರಮೇಶ್ವರ ದೇವರ ಉತ್ಸವ ವಿಜೃಂಭಣೆಯಿಂದ ನಡೆಯಿತು.

    Share Information
    Advertisement
    Click to comment

    You must be logged in to post a comment Login

    Leave a Reply