Connect with us

    DAKSHINA KANNADA

    ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮ

    ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮ

    ಸುಬ್ರಹ್ಮಣ್ಯ ಅಕ್ಟೋಬರ್ 3: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ನೂತನ ಬ್ರಹ್ಮರಥ ಸಮರ್ಪಣೆಯಾಗಿದೆ. ಉಡುಪಿಯ ಕೋಟೇಶ್ವರದಲ್ಲಿ ನಿರ್ಮಾಣಗೊಂಡ ಈ ರಥವನ್ನು ರಸ್ತೆ ಮಾರ್ಗ ಮೂಲಕ ಕ್ಷೇತ್ರಕ್ಕೆ ತರಲಾಗಿದ್ದು , ರಥ ಬರುವ ಹಲವು ಕಡೆಗಳಲ್ಲಿ ಬ್ರಹ್ಮರಥಕ್ಕೆ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸಿದ್ದರು.

    ಬುಧವಾರ ಸಂಜೆ ವೇಳೆಗೆ ಕುಕ್ಕೆ ಸುಬ್ರಹ್ಮಣ್ಯ ತಲುಪಲಿದ ಬ್ರಹ್ಮರಥಕ್ಕೆ ಕ್ಷೇತ್ರದ ವತಿಯಿಂದ ಪೂಜೆ ನೆರವೇರಿಸಲಾಯಿತು. ಧಾರ್ಮಿಕ ವಿಧಿ-ವಿಧಾನಗಳ ಮೂಲಕ ರಥವನ್ನು ದೇವರಿಗೆ ಸಮರ್ಪಿಸಲಾಯಿತು. ಬ್ರಹ್ಮ ರಥ ಸಂಚರಿಸುವ ದಾರಿಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬ್ರಹ್ಮರಥವನ್ನು ಸ್ವಾಗತ ಮಾಡಿದ್ದರು.

    ಜಾತಿ-ಧರ್ಮದ ಕಟ್ಟುಪಾಡುಗಳನ್ನು ಬಿಟ್ಟು ಎಲ್ಲಾ ಸಮಾಜ ರಥವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಸ್ವಾಗತಿಸಿದ್ದು ವಿಶೇಷವಾಗಿತ್ತು. ಮರ್ಧಾಳದ ಮಸೀದಿ ವತಿಯಿಂದ ಬ್ರಹ್ಮರಥದ ಜೊತೆಗೆ ಬಂದ ಭಕ್ತಾಧಿಗಳಿಗೆ ಲಡ್ಡು ಹಾಗೂ ತಂಪುಪಾನೀಯದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

    ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ಶೆಟ್ಟಿ ಕಡಬ ಸುಮಾರು ಎರಡೂವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬ್ರಹ್ಮ ರಥವನ್ನು ಕುಕ್ಕೆಗೆ ದಾನವಾಗಿ ನೀಡಲಿದ್ದಾರೆ. ಪ್ರಶಸ್ತಿ ವಿಜೇತ ಕೋಟೇಶ್ವರದ ಲಕ್ಷ್ಮೀನಾರಾಯಣ ಆಚಾರ್ಯ ಈ ಬ್ರಹ್ಮರಥವನ್ನು ನಿರ್ಮಾಣ ಮಾಡಿದ್ದು, 400 ವರ್ಷಗಳ ಹಿಂದಿನ ಹಳೆಯ ಬ್ರಹ್ಮರಥದ ರೀತಿಯೇ ಕಿಂಚಿತ್ತೂ ವ್ಯತ್ಯಾಸ ವಾಗದಂತೆ ಮಾಡಲಾಗಿದೆ. ಬ್ರಹ್ಮ ರಥ ಸುಬ್ರಹ್ಮಣ್ಯ ವನ್ನು ತಲುಪಲಿರುವ ಹಿನ್ನಲೆಯಲ್ಲಿ ,ಭವ್ಯ ಮೆರವಣಿಗೆ ಮೂಲಕ ರಥವನ್ನು ಸ್ವಾಗತಿಸಲಾಯಿತು.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply