LATEST NEWS
ಕೆಎಸ್ಆರ್ ಟಿಸಿ ಚೆಕ್ಕಿಂಗ್ ಇನ್ಸಪೆಕ್ಟರ್ ಹಾಗೂ ಬಸ್ ಸಿಬ್ಬಂದಿ ನಡುವಿನ ಜಗಳಕ್ಕೆ ಬೇಸತ್ತ ಮಹಿಳೆಯಿಂದ ತರಾಟೆ
ಉಡುಪಿ ಅಕ್ಟೋಬರ್ 09: ಚೆಕ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸಾರಿಗೆ ಬಸ್ ನಿರ್ವಾಹಕ ಹಾಗೂ ಚೆಕಿಂಗ್ ಇನ್ಸ್ಪೆಕ್ಟರ್ ನಡುವೆ ನಡೆದ ಜಗಳಕ್ಕೆ ಕೋಪಕೊಂಡ ಪ್ರಯಾಣಿಕ ಮಹಿಳೆಯೊಬ್ಬರ ಚೆಕ್ಕಿಂಗ್ ಇನ್ಸ್ ಪೆಕ್ಟರನ್ನೇ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕುಂದಾಪುರದಿಂದ ಉಡುಪಿಗೆ ತೆರಳುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಈ ಘಟನೆ ನಡೆದಿದ್ದು, ಸರ್ಕಾರಿ ಬಸ್ ಚಾಲಕ ಹಾಗೂ ಬಸ್ ಚೆಕ್ಕಿಂಗ್ ಇನ್ಸ್ಪೆಕ್ಟರ್ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ. ಬಸ್ ಉಡುಪಿಗೆ ಬರುತ್ತಿದ್ದಂತೆ ನಿರ್ವಾಹಕ ಹಾಗೂ ಇನ್ಸ್ ಪೆಕ್ಟರ್ ನಡುವೆ ಮಾತಿನ ಚಕಮಕಿ ಶುರವಾಗಿದ್ದು, ಪ್ರಯಾಣಿಕರಿಗೆ ಇದರಿಂದಾಗಿ ಕಿರಿಕಿರಿಗೆ ಒಳಗಾಗಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡು ಬಸ್ಸಿನಲ್ಲಿದ್ದ ಮಹಿಳೆಯೊಬ್ಬರು ಚೆಕ್ಕಿಂಗ್ ಇನ್ಸಪೆಕ್ಟರ್ ಗೆ ನೀವು ಕಿರುಚಾಡಿ ಪಬ್ಲಕ್ಗೆ ತೊಂದ್ರೆ ಕೊಡಬೇಡಿ, ಬಸ್ ನಿಲ್ಲಿಸಬೇಡಿ ಅಂತ ಚೆಕ್ಕಿಂಗ್ ಇನ್ಸ್ಪೆಕ್ಟರ್ನನ್ನು ತರಾಟೆಗೆ ತೆಗೆದುಕೊಂಡರು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್.
You must be logged in to post a comment Login