Connect with us

    LATEST NEWS

    ಎಬಿವಿಪಿ ಹೋರಾಟದ ಫಲ – ಕೆರಾಡಿಗೆ ಬಂತು ಕೆಎಸ್ಆರ್ ಟಿಸಿ ಬಸ್

    ಕುಂದಾಪುರ ಜುಲೈ 8: ವಿದ್ಯಾರ್ಥಿಗಳ ಹೋರಾಟದ ಫಲವಾಗಿ ಕೆರಾಡಿಗೆ ಕೊನೆಗೂ ಬಸ್ ಸೌಕರ್ಯವನ್ನು ರಾಜ್ಯ ಸರಕಾರ ಒದಗಿಸಿದೆ.


    ಬೈಂದೂರು ತಾಲೂಕು ವ್ಯಾಪ್ತಿಯ ಕುಗ್ರಾಮ ಕೆರಾಡಿಗೆ ಯಾವುದೇ ಬಸ್ ಸೌಕರ್ಯವಿಲ್ಲದ ಕಾರಣ ಜನರು ಸಂಕಷ್ಟದಲ್ಲಿದ್ದರು, ವಿಧ್ಯಾರ್ಥಿಗಳಿಗೆ ಶಾಲೆ ಕಾಲೇಜು ತೆರಳಲು ಸಮಸ್ಯೆಯಾದ ಬಿನ್ನಲೆ ಕೆರಾಡಿ ಕುಂದಾಪುರ ಭಾಗದ ನೂರಾರು ಎಬಿವಿಪಿ ಕಾರ್ಯಕರ್ತರು ಬಸ್ ಗಾಗಿ ಪ್ರತಿಭಟನೆ ನಡೆಸಿದ್ದರು.

    ಈ ಹಿನ್ನಲೆ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ಎರಡು ದಿನಗಳ ಹಿಂದೆ ಕೆರಾಡಿ ಭಾಗಕ್ಕೆ ಕೆಎಸ್ಆರ್ ಟಿಸಿ ಬಸ್ ನ್ನು ಒದಗಿಸಿದೆ. ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರು ಬಸ್ ಸೇವೆ ಉದ್ಘಾಟಿಸಿದ್ದಾರೆ. ಆದರೆ ಹೊಸ ಬಸ್ ಉದ್ಘಾಟನೆ ವಿಚಾರ ವಿವಾದಕ್ಕೆ ಕಾರಣವಾಗಿದ್ದು, ಡಿಪೋದಿಂದ ಹೊರಡುವ ಸರಕಾರಿ ಬಸ್ ನ್ನು ಶಾಸಕರ ಮನೆಗೆ ಕರೆಸಿ‌ ಪೂಜೆ ಮಾಡಿ ಉದ್ಘಾಟನೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಈ ನಡೆಯ ಕುರಿತು ವಿರೋಧ ವ್ಯಕ್ತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply