DAKSHINA KANNADA
ಕೋಟಿ ಚೆನ್ನಯ್ಯ ತಾಯಿಗೆ ಅವಮಾನ – ಪುತ್ತೂರು ಬಿಲ್ಲವ ಸಂಘದಿಂದ ದೂರು
ಪುತ್ತೂರು ಸೆಪ್ಟೆಂಬರ್ 10 : ಕೋಟಿ ಚೆನ್ನಯ್ಯ ತಾಯಿ ದೇಯಿಬೈದೆದಿ ವಿಗ್ರಹಕ್ಕೆ ಯುವಕನೊಬ್ಬ ಅವಮಾನ ಮಾಡಿ ಆ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ವಿರುದ್ದ ಬಿಲ್ಲವ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.
ದೇಯಿಬೈದೆದಿ ಪುತ್ಥಳಿ ಬಳಿ ಅಶ್ಲೀಲ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಚಿತ್ರದಲ್ಲಿರುವ ವ್ಯಕ್ತಿಯ ಮೇಲೆ ಕ್ರಮ ಜರುಗಿಸುವಂತೆ ಪೋಲೀಸರಿಗೆ ದೂರು ನೀಡಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಈ ಸಂಬಂಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೋಟಿ ಚೆನ್ನಯ್ಯ ತಾಯಿಗೇ ಅವಮಾನ ವ್ಯಾಪಕ ಖಂಡನೆ
ದೇಯಿಬೈದೆದಿ ಪುತ್ಥಳಿ ಬಳಿ ಅಶ್ಲೀಲ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿದಾಡುತ್ತಿರುವುದು ದೇಯಿ ಬೈದೇತಿಯ ಭಕ್ತರ ಹಾಗೂ ಅಖಂಡ ಬಿಲ್ಲವ ಸಮಾಜದವರ ಭಾವನೆಗೆ ಧಕ್ಕೆ ಉಂಟಾಗಿದ್ದು, ಈ ರೀತಿ ಸಮಾಜದಲ್ಲಿ ಅಶಾಂತಿ ಸೃಷ್ಠಿಸಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೋಟಿ ಚೆನ್ನಯ್ಯ ತಾಯಿಗೆ ಅವಮಾನ ಪ್ರಕರಣ ಪೊಲೀಸರಿಗೆ ಮೊದಲೇ ಗೊತ್ತಿತ್ತೇ?
You must be logged in to post a comment Login