Connect with us

    MANGALORE

    ಕೊಂಚಾಡಿ ಕಾಶೀ ಮಠದಲ್ಲಿ 9 ದಿನಗಳ ಪರ್ಯಂತ ” ರಾಮಾಯಣ ಕಥಾ ಪ್ರವಚನ ಪಾರಾಯಣ

    ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶಾರ್ವರಿ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ಪ್ರಾರಂಭಗೊಂಡಿದ್ದು ಈ ಸಂದರ್ಭದಲ್ಲಿ ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ,  ಪಾರಾಯಣಗಳು ನಡೆಯಲಿವೆ.

    ಲೋಕ ಕಲ್ಯಾಣಾರ್ಥ ಜರಗ ಲಿರುವುದು , ಈ ಪುಣ್ಯಪ್ರದ ಶ್ರಾವಣ ಮಾಸದ ಪ್ರಾರಂಭದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ದೇವರ ಲೀಲೆ – ವೈಭವ , ದೇವರ ಚರಿತ್ರೆ ” ಶ್ರೀ ರಾಮಾಯಣ ಪಾರಾಯಣ ಹಾಗೂ ಪ್ರವಚನ 9 ದಿನಗಳ ಪರ್ಯಂತ ಕೊಂಚಾಡಿ ಕಾಶಿ ಮಠದಲ್ಲಿ ಜರುಗಲಿರುವುದು. ಆಗಸ್ಟ್ 4ರಂದು ಖುಗೋಪಾಕರ್ಮ, ಆಗಸ್ಟ್ 11 ರಂದು ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಇದಲ್ಲದೇ ಆಗಸ್ಟ್ 22 -29ರ ವರೆಗೆ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು, ಸೆಪ್ಟಂಬರ್ 1ರಂದು ಅನಂತ ಚತುರ್ದಶಿ ವ್ರತಾಚಾರಣೆ ನಡೆಯಲಿದೆ.

    ADVERTISEMENT

    ಸೆಪ್ಟಂಬರ್ 18 ರಿಂದ ಅಧಿಕಮಾಸ ಪ್ರಾರಂಭ , ಅಕ್ಟೋಬರ್ 17 ರಿಂದ ನವರಾತ್ರಿ ಆಚರಣೆ ಪ್ರಾರಂಭವಾಗಲಿದ್ದು ಅಕ್ಟೋಬರ್ 28 ರ ವರೆಗೆ ವಿವಿಧ ವಾಹನ ಪೂಜಾ ಸೇವೆಗಳು ನಡೆಯಲಿರುವುದು . ಈ ಬಾರಿ ಕೊರೊನ ಸೋಂಕು ದಿನೇ ದಿನೇ ಹೆಚ್ಚು ಹರಡುತಿದ್ದು ಕೋವಿಡ್-19 (ಕೊರೋನ ವೈರಾಣು) ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳಿಂದ ಸಾಮಾಜಿಕ ಅಂತರವನ್ನು ಕಾಪಾಡುವುದು ಕಷ್ಟವಾಗುವುದರಿಂದ ಭಕ್ತಾದಿಗಳಿಗೆ ಶ್ರೀ ಕ್ಷೇತ್ರಕ್ಕೆ ಭೇಟಿಯನ್ನು ನಿರ್ಭಂದಿಸಲಾಗಿದೆ.

    ಸರ್ಕಾರದ ಅನ್ವಯದಂತೆ ಶ್ರೀ ದೇವಳದಲ್ಲಿ ಸುರಕ್ಷತಾ ದೃಷ್ಠಿಯನುಸಾರ ಕೈಗೊಳ್ಳ ಬೇಕಾದ ಅಗತ್ಯ ಸುರಕ್ಷತಾ ಕ್ರಮಗಳು ಈ ಕೆಳಗಿನಂತಿದ್ದು ಕಡ್ಡಾಯವಾಗಿ ಪಾಲಿಸ ಬೇಕಾಗಿ ವಿನಂತಿ. ಮುಂದಿನ ದಿನಗಳಲ್ಲಿ ಅನುಕೂಲಕರ ಪರಿಸ್ಥಿತಿ ಉಂಟಾದಾಗ ಭಕ್ತಾದಿಗಳಿಗೆ ಸೇವೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು.

    Share Information
    Advertisement
    Click to comment

    You must be logged in to post a comment Login

    Leave a Reply