Connect with us

    LATEST NEWS

    ಕೇರಳ – ಮಾವಿನ ಹಣ್ಣನ್ನು ಕದ್ದು ಸೇವೆಯಿಂದಲೇ ವಜಾಗೊಂಡ ಪೊಲೀಸ್ ಅಧಿಕಾರಿ

    ತಿರುವನಂತಪುರಂ ಎಪ್ರಿಲ್ 26 : ರಸ್ತೆ ಬದಿಯ ಹಣ್ಣಿನ ಅಂಗಡಿಯಿಂದ 10ಕೆಜಿ ಮಾವಿನ ಹಣ್ಣುಗಳನ್ನು ಕದ್ದ ಕಂಜಿರಪಲ್ಲಿ ಪೊಲೀಸ್ ಅಧಿಕಾರಿಯನ್ನು ಕೆಲಸದಿಂದ ವಜಾಗೊಂಡಿದ್ದಾರೆ. ಸಿವಿಲ್ ಪೊಲೀಸ್ ಅಧಿಕಾರಿ ಪಿ.ವಿ.ಶಿಹಾಬ್ ಅವರನ್ನು ಇಡುಕ್ಕಿ ಜಿಲ್ಲಾ ಪೊಲೀಸ್ ಮುಖ್ಯಸ್ಥರು ವಜಾಗೊಳಿಸಿದ್ದಾರೆ.


    ಕಳೆದ ವರ್ಷ ಸೆಪ್ಟೆಂಬರ್ 30 ರಂದು ಈ ಘಟನೆ ನಡೆದಿತ್ತು. ಕೊಟ್ಟಾಯಂನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಇಡುಕ್ಕಿ ಎಆರ್‌ ಕ್ಯಾಂಪ್‌ನ ಅಧಿಕಾರಿ ಶಿಹಾಬ್‌ ಎಂಬವರು ಕಂಜಿರಪಲ್ಲಿ ಹಣ್ಣಿನ ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕದ್ದಿದ್ದಾರೆ. ಮಾರಾಟಕ್ಕೆ ತಂದಿದ್ದ 10 ಕೆಜಿ ಮಾವಿನ ಹಣ್ಣನ್ನು ಶಿಹಾಬ್ ತೆಗೆದುಕೊಂಡು ಹೋಗಿದ್ದು, ಆ ಸಂದರ್ಭ ಪ್ರತಿ ಕೆಜಿ ಮಾವಿನ ಹಣ್ಮಿಗೆ 600 ರೂ ಇತ್ತು, ಪೊಲೀಸ್ ಅಧಿಕಾರಿಯೊಬ್ಬರು ಅಂಗಡಿಯಿಂದ ಮಾವಿನ ಹಣ್ಣನ್ನು ಕದ್ದು ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯದ ಸಿಸಿಟಿವಿ ರೆಕಾರ್ಡ್ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಶಿಹಾಬ್ ತಲೆಮರೆಸಿಕೊಂಡಿದ್ದಾನೆ. ಅಂಗಡಿ ಮಾಲೀಕರ ದೂರಿನ ಮೇರೆಗೆ ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂತರ ಇಡುಕ್ಕಿ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಶಿಹಾಬ್ ಅವರನ್ನು ಅಮಾನತುಗೊಳಿಸಿದ್ದರು.

    ಬಳಿಕ ಈ ಪ್ರಕರಣ ಪೊಲೀಸ್ ಇಲಾಖೆಗೆ ಕಳಂಕ ತಂದ ಹಿನ್ನಲೆ ಪ್ರಕರಣದ ಇತ್ಯರ್ಥ ಮಾಡಲು ಪೊಲೀಸ್ ಇಲಾಖೆ ಮುಂದಾಗಿತ್ತು, ಅದರಂತೆ ಅಂಗಡಿ ಮಾಲೀಕ ಕಳ್ಳತನದ ಕೇಸ್ ನ್ನು ವಾಪಾಸ್ ಪಡೆದಿದ್ದು, ಕೋರ್ಟ್ ನಲ್ಲೂ ಈ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿತ್ತು. ಆದರೂ ಇದು ಜನರ ಮಧ್ಯೆ ಮಾತ್ರ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿಯೇ ಪರಿಣಮಿಸಿತ್ತು. ಈ ಹಿನ್ನಲೆ ಆರೋಪಿ ಪೊಲೀಸ್ ಅಧಿಕಾರಿಯನ್ನು ಅವರನ್ನು ವಜಾಗೊಳಿಸುವಂತೆ ಎಸ್ಪಿ ಗೃಹ ಇಲಾಖೆಗೆ ಸೂಚಿಸಿದರು. ಈಗ ಮಾವಿನ ಹಣ್ಣನ್ನ ಕದ್ದ ಪೊಲೀಸ್ ಅಧಿಕಾರಿ ಸೇವೆಯಿಂದಲೇ ವಜಾಗೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply