Connect with us

    KARNATAKA

    ಕಾಸರಗೋಡು : ಅಕ್ಟೋಬರ್ 6 ರಂದು ‘ ದಸರಾ ಕವಿಶ್ರೇಷ್ಠ’ ಪ್ರಶಸ್ತಿ ಪ್ರದಾನ..!

    ಕಾಸರಗೋಡು : ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಪಾಂಗೋಡು ಶ್ರೀ ದುರ್ಗಾಪಮೇಶ್ವರಿ ಸಾಂಸ್ಕೃತಿಕ ಘಟಕ, ವಿಜ್ಡಮ್ ಇನ್‌ಸ್ಟಿಟ್ಯೂಟ್ ನೆಟ್ವರ್ಕ್, ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಸಹಕಾರದಲ್ಲಿ ನಡೆಯುವ ‘ ಕಾಸರಗೋಡು ದಸರಾ ಕವಿಶ್ರೇಷ್ಠ ಪ್ರಶಸ್ತಿ- 2024 ‘ ಪ್ರದಾನ ಸಮಾರಂಭವು ಅ.6ರಂದು ಅಪರಾಹ್ನ 2ರಿಂದ ನಡೆಯಲಿದೆ.

     

    ಈ ಪ್ರಶಸ್ತಿಗೆ ಡಾ. ಕೆ. ಜಿ ವೆಂಕಟೇಶ್ (ಶಿಕ್ಷಣ), ರಾಧಾಕೃಷ್ಣ ಕೆ ಉಳಿಯತ್ತಡ್ಕ (ಕನ್ನಡ ಹೋರಾಟಗಾರರು), ಪಿ. ವಿ ಪ್ರದೀಪ್ ಕುಮಾರ್, ಮಂಗಳೂರು (ಪುಸ್ತಕ ಪ್ರಕಾಶನ), ಡಾ. ಕೊಳ್ಚಪ್ಪೆ ಗೋವಿಂದ ಭಟ್ (ಕಥಾ ಸಾಹಿತ್ಯ), ಲಕ್ಷ್ಮೀ ವಿ ಭಟ್ ಮಂಜೇಶ್ವರ (ಮಕ್ಕಳ ಸಾಹಿತ್ಯ), ಜಯಾನಂದ ಪೆರಾಜೆ (ಸಂಘಟನೆ), ನಾಟಕ ಭಾರ್ಗವ ಕೆಂಪರಾಜು (ರಂಗಭೂಮಿ), ವಿರಾಜ್ ಅಡೂರು (ಅಂಕಣ ಬರಹಗಾರರು), ಸೀತಾಲಕ್ಷ್ಮಿ ವರ್ಮ ವಿಟ್ಲ (ನಿರೂಪಣೆ), ಶಾಂತಾ ಪುತ್ತೂರು (ಶಿಬಿರ ಸಂಘಟಕಿ), ರತ್ನಾ ಕೆ ಭಟ್ (ಯಕ್ಷಗಾನ) ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಕೆ. ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply