Connect with us

LATEST NEWS

ಕಾರ್ಕಳ : ಬೆಳ್ಮಣ್ ನಲ್ಲಿ ಅವಿವಾಹಿತ ನೇಣಿಗೆ ಶರಣು..!

Share Information

ಅವಿವಾಹಿತರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಬೆಳ್ಮಣ್ ನ ಜಂತ್ರದಲ್ಲಿ ವರದಿಯಾಗಿದೆ.

ಕಾರ್ಕಳ :  ಅವಿವಾಹಿತರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಬೆಳ್ಮಣ್ ನ ಜಂತ್ರದಲ್ಲಿ ವರದಿಯಾಗಿದೆ.


ಜಂತ್ರ ನಿವಾಸಿ ಸಂತೋಷ ಆಚಾರ್ಯ (41) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.

ಸಂತೋಷರವರು ಸುಮಾರು 10 ವರ್ಷದಿಂದ ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

 

ಅವಿವಾಹಿತರಾಗಿರುವ ಇವರು ಮನನೊಂದು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 


Share Information
Advertisement
Click to comment

You must be logged in to post a comment Login

Leave a Reply