Connect with us

LATEST NEWS

ಕಾರ್ಕಳ – ಜಾಗದ ತಕರಾರು ಅಣ್ಣನನ್ನು ಚೂರಿಯಿಂದ ಇರಿದು ಕೊಂದ ತಮ್ಮ

ಕಾರ್ಕಳ : ಜಾಗದ ತರಕಾರಿಗೆ ಸಂಬಂಧಿಸಿದಂತೆ ಹಾಡುಹಗಲೇ ಅಣ್ಣನನ್ನು ತಮ್ಮ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಬಜಕಳ ಎಂಬಲ್ಲಿ ಭಾನುವಾರ ನಡೆದಿದೆ.


ಮೃತರನ್ನು ಶೇಖರ್‌ (50) ಎಂದು ಗುರುತಿಸಲಾಗಿದ್ದ ಅವರ ತಮ್ಮ ರಾಜು(35) ಕೊಲೆಗೈದ ಆರೋಪಿ. ಜಾಗದ ತಕರಾರಿಗೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ. ಶೇಖರ್‌ ಮತ್ತು ರಾಜು ಸಹೋದರರಾಗಿದ್ದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕೂಲಿ ಕಾರ್ಮಿಕರು ಆಗಿರುವ ಇವರಿಬ್ಬರ ನಡುವೆ ಅನೇಕ ವರ್ಷಗಳಿಂದ ವೈಮನಸ್ಸು ಇತ್ತು. ಅವರ ತಾಯಿಗೆ ಮಂಜೂರಾಗಿರುವ ಸುಮಾರು 25 ಸೆಂಟ್ಸ್‌ ಭೂಮಿಯಲ್ಲಿ ಶೇಖರ ವಾಸವಾಗಿದ್ದು, ರಾಜು ಅಲ್ಲೇ ಸುಮಾರು ಅರ್ಧ ಕಿಲೋ ಮೀಟರ್‌ ಅಂತರದಲ್ಲಿ ಪ್ರತ್ಯೇಕ ಶೆಡ್‌ ನಿರ್ಮಿಸಿ ವಾಸವಾಗಿದ್ದ.

ಈ ನಡುವೆ ಭಾನುವಾರ ತಕರಾರಿರುವ ಜಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭ ಪಾನಮತ್ತನಾಗಿ ಅಲ್ಲಿ ಆಗಮಿಸಿದ ರಾಜು, ತಾಯಿಗೆ ಸಂಬಂಧಿಸಿದ ಜಾಗ ಇದು ನನಗೂ ಹಕ್ಕಿದೆ. ಆದ್ದರಿಂದ ನೀನೊಬ್ಬನೇ ಮನೆಯ ದುರಸ್ತಿ ಕೆಲಸ ನಿರ್ವಹಿಸಬಾರದು ಎಂದು ಆಕ್ಷೇಪಿಸಿದ್ದು ಮಾತಿನ ಚಕಮಕಿ ನಡೆದಿದೆ, ಈ ಸಂದರ್ಭ ರಾಜು ಚೂರಿಯನ್ನು ತಂದಿದ್ದ.  ಕೆಲಸದಲ್ಲಿ ಮಗ್ನನಾಗಿದ್ದ ಅಣ್ಣನ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ತಿವಿದಿದ್ದ. ಅತೀವ ರಕ್ತಸ್ರಾವದಿಂದ ಶೇಖರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆರೋಪಿ ರಾಜುನನ್ನು ಪೊಲೀಸರು ಸ್ಥಳೀಯ ಕ್ರಷರ್‌ ಬಳಿಯ ರಸ್ತೆಯಲ್ಲಿನಡೆದುಕೊಂಡು ಹೋಗುತ್ತಿರುವ ವೇಳೆ ಬಂಧಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *