LATEST NEWS
ಕಾರ್ಕಳದಲ್ಲಿ ಸಾಪ್ಟ್ ಹಿಂದುತ್ವಕ್ಕೆ ಮಣೆ – ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಕಾಂಗ್ರೇಸ್ ಅಭ್ಯರ್ಥಿ
ಉಡುಪಿ ಎಪ್ರಿಲ್ 15: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ತನ್ನ ಮೂರನೆ ಪಟ್ಟಿ ಇಂದು ಬಿಡುಗಡೆ ಮಾಡಿದ್ದು, ಉಡುಪಿ ಜಿಲ್ಲೆಯ ಹೈವೋಲ್ಟೆಜ್ ಕ್ಷೇತ್ರ ಕಾರ್ಕಳದಲ್ಲಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರಿಗೆ ಟಿಕೇಟ್ ನೀಡಿದೆ.
ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ಸದ್ಯ ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಒಂದು ಕಡೆ ಗುರು ಶಿಷ್ಯರ ಕಾಳಗ ನಡೆಯುತ್ತಿದ್ದರೆ ಇದೀಗ ಕಾಂಗ್ರೇಸ್ ಕೂಡ ಈ ಬಾರಿ ಹಿಂದುತ್ವಕ್ಕೆ ಆದ್ಯತೆ ನೀಡಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿಗೆ ಟಿಕೇಟ್ ನೀಡಿದೆ. ಈ ಮೂಲಕ ಹಿಂದುತ್ವದ ಕಣವಾಗಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಾಪ್ಟ್ ಹಿಂದುತ್ವಕ್ಕೆ ಮಣೆ ಹಾಕಿದೆ.
ಗುತ್ತಿಗೆದಾರರಾಗಿರುವ ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರಿಗೆ ಟಿಕೇಟ್ ನೀಡಿದ್ದು, ಕಾರ್ಕಳದಲ್ಲಿ ವೀರಪ್ಪ ಮೊಯ್ಲಿಗೆ ಇದು ಹಿನ್ನಲೆ ಎಂದು ಹೇಳಲಾಗಿದ್ದು, ಮೋಯ್ಲಿ ವಿರೋಧದ ನಡುವೆಯೂ ಮುನಿಯಾಲು ಗೆ ಟಿಕೆಟ್ ನೀಡಿದೆ.
You must be logged in to post a comment Login