UDUPI
ಕಲ್ಯಾಣ್ ಜುವೆಲ್ಲರಿ ಪ್ರೀಮಿಯಂ ಮಳಿಗೆಯಲ್ಲಿ ಕಳ್ಳತನ
ಕಲ್ಯಾಣ್ ಜುವೆಲ್ಲರಿ ಪ್ರೀಮಿಯಂ ಮಳಿಗೆಯಲ್ಲಿ ಕಳ್ಳತನ
ಉಡುಪಿ ಅಕ್ಟೋಬರ್ 16: ಕಲ್ಯಾಣ್ ಪ್ರೀಮಿಯಂ ಮಳಿಗೆಗೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ಕಳೆದ ರಾತ್ರಿ ಉಡುಪಿಯ ಹೆಬ್ರಿಯಲ್ಲಿ ನಡೆದಿದೆ. ಹೆಬ್ರಿಯ ಸಂತೆ ಮಾರ್ಕೆಟ್ ಬಳಿ ಇರುವ ಕಲ್ಯಾಣ್ ಜ್ಯುವೆಲರಿ ಗ್ರಾಹಕರ ಪ್ರೀಮಿಯಂ ಮಳಿಗೆಗೆ ಕಳೆದ ರಾತ್ರಿ ನುಗ್ಗಿದ ಕಳ್ಳರು ನುಗ್ಗಿದ್ದಾರೆ.
ಮಳಿಗೆಯಲ್ಲಿದ್ದ ಗ್ರಾಹಕರ 27 ಸಾವಿರ ರೂಪಾಯಿ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಕಳೆದ ರಾತ್ರಿ ಮಳೆಯ ನಡುವೆ ಶೆಟರ್ ಬ್ರೇಕ್ ಮಾಡುವ ಮೂಲಕ ಕಳ್ಳರು ಮಳಿಗೆಗೆ ನುಗ್ಗಿದ್ದಾರೆ. ಇಂದು ಮುಂಜಾನೆ ಕಳ್ಳರ ಈ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಹೆಬ್ರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Facebook Comments
You may like
ಕಲಿತ ಶಾಲೆ ಮುಚ್ಚಬಾರದೆಂದು ಪ್ರಧಾನಿಗೆ ಪತ್ರ ಬರೆದ ಬಾಲಕಿ…!
ಈಜಲು ತೆರಳಿದ ಇಬ್ಬರು ನೀರಿನಲ್ಲಿ ಮುಳುಗಿ ಸಾವು
ಉಡುಪಿ ಕ್ಷೇತ್ರ ವ್ಯಾಪ್ತಿಯಲ್ಲಿ 88 ಕೋಟಿ ರೂಪಾಯಿಗಳ ಸೇತುವೆ ನಿರ್ಮಾಣ- ಪ್ರಮೋದ್
‘ಮಹಾತ್ಮರ ಸ್ಮರಣೆಯಿಂದ ಉತ್ತಮ ಸಮಾಜ’: ನಳಿನ್ ಪ್ರದೀಪ್ ರಾವ್
ಜ.30ರಿಂದ ಕುಷ್ಠ ಅರಿವು ಆಂದೋಲನ :ಶಿವಾನಂದ ಕಾಪಶಿ
ಸರ್ಕಾರ ನೀಡುವ ಸೌಲಭ್ಯಗಳ ಸದುಪಯೋಗ ಅಗತ್ಯ : ಪ್ರಮೋದ್ ಮಧ್ವರಾಜ್
You must be logged in to post a comment Login