Connect with us

DAKSHINA KANNADA

ನೂರಕ್ಕೆ ನೂರು ಕಾಂಗ್ರೇಸ್ ನವರು ಮಾಡಿರುವ ಕಿತಾಪತಿ – ಕಲ್ಲಡ್ಕ ಪ್ರಭಾಕರ್ ಭಟ್

ಪುತ್ತೂರು, ಮೇ 18: ಬಿಜೆಪಿ ನಾಯಕರ ಬ್ಯಾನರ್ ವಿವಾದ ಸಂಭಂಧ ಪೋಲೀಸರಿಂದ ಹಲ್ಲೆಗೊಳಗಾದ ಹಿಂದೂ‌ ಕಾರ್ಯಕರ್ತರನ್ನು ಆರ್.ಎಸ್.ಎಸ್ ಮುಖಂಡ‌ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ‌ ಮಾಡಿ ಹೊಸ ಸರಕಾರ ಮುಂದಿನ 5 ವರ್ಷ ಹಿಂದುಗಳ ಮೇಲೆ ಏನು ಮಾಡುತ್ತೆ ಅನ್ನೋದರ ಸ್ಯಾಂಪಲ್ ಇದು ಎಂದು ಹೇಳಿಕೆ ನೀಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ ಕಂಬಳದ ಕೋಣಕ್ಕೆ ಹೊಡೆದರೂ ಶಿಕ್ಷೆಯಾಗುವ ಕಾಲವಿದು, ಆದರೆ ಹಿಂದೂ ಕಾರ್ಯಕರ್ತರ ಮೇಲೆ ಪ್ರಾಣಿಗಳಿಗಿಂತಲೂ ಕ್ರೂರವಾಗಿ ಹೊಡೆದಿದ್ದಾರೆ. ಪೋಲೀಸರು ಹಿಂದೂ ಕಾರ್ಯಕರ್ತರನ್ನು ಪ್ರಾಣಿಗಿಂತಲೂ ಹೀನಾಯವಾಗಿ ನಡೆಸಿಕೊಂಡಿದ್ದಾರೆ.

ಇಬ್ಬರು ಪೋಲೀಸರನ್ನು ಅಮಾನತು ಮಾಡಿದ್ದಾರೆ. ಘಟನೆಗೆ ಮೂಲ ಕಾರಣವಾದ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು. ಪೋಲೀಸರು ನಮಗೆ ಒತ್ತಡ ಇತ್ತು ಎನ್ನುತ್ತಾರೆ. ಯಾರ ಒತ್ತಡ ಇದೆ ಅನ್ನೋದನ್ನ ಹೇಳಲಿ, ಬೇರೆ ಯಾರು ಒತ್ತಡ ಮಾಡಬೇಕು.

ಕಾಂಗ್ರೇಸ್ ಸರಕಾರವೇ ಒತ್ತಡ‌ ಹಾಕಬೇಕು. ಬಿಜೆಪಿಯವರು ಪೋಲೀಸರ ಮೇಲೆ ಒತ್ತಡ ಹಾಕ್ಲಿಕ್ಕೆ ಆಗುತ್ತಾ?. ಸಣ್ಣಪುಟ್ಟ ವೆತ್ಯಾಸ ಆಗಿದೆ, ಆದರೆ ಇದಕ್ಕೆ ಇಷ್ಟು ದೊಡ್ಡ ಶಿಕ್ಷೆಯ ಅಗತ್ಯವಿಲ್ಲ. ಸರಕಾರ ಹೇಳುತ್ತೆ ಎಂದು ಪೋಲೀಸರು ಹೀಗೆ ಮಾಡಿದರೆ ಮುಂದೆ ಕೆಟ್ಟ ಪರಿಣಾಮ ಎದುರಿಸಬೇಕಾದೀತು. ಈ ಮೂಲಕ ಸರಕಾರಕ್ಕೆ ಎಚ್ಚರ ನೀಡುತ್ತಿದ್ದೇನೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *