Connect with us

    BANTWAL

    ಬಂಟ್ವಾಳ – ನೇತ್ರಾವತಿ ನದಿಗೆ ಹಾರಿದ ಯುವಕ….!!

    ಬಂಟ್ವಾಳ ಮೇ 18: ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದ್ದು, ಇದೀಗ ಯುವಕನಿಗಾಗಿ ಕಾರ್ಯಾಚಾರಣೆ ನಡೆಸಲಾಗುತ್ತಿದೆ.


    ನೆಟ್ಲ ನಿವಾಸಿ ವಿವಾಹಿತ ಪ್ರವೀಣ್ ನೆಟ್ಲ ನೇತ್ರಾವತಿ ನದಿಗೆ ಹಾರಿದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಈತ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ. ಕಳೆದ ಎರಡು ದಿನಗಳಿಂದ ಕೆಲಸಕ್ಕೆ ಹೋಗದ ತಿರುಗಾಡುತ್ತಿದ್ದ ಎನ್ನಲಾಗಿದ್ದು, ನದಿಗೆ ಹಾರುವ ಮುನ್ನ ಮೊದಲು ವ್ಯಾಟ್ಸ್ಆಪ್ ಗ್ರೂಪ್ ನಲ್ಲಿ ಸಾಯುತ್ತೆನೆಂದು ಮೆಸೇಜ್ ಕೂಡ ಮಾಡಿದ್ದಾನೆ ಎಂದು ಹೇಳಲಾಗಿದೆ.


    ಬೈಕಿನಲ್ಲಿ ಬಂದ ಈತ ನೇತ್ರಾವತಿ ಹೊಸ ಸೇತುವೆ ಮೇಲೆ ಬೈಕ್ ನಿಲ್ಲಿಸಿ ಚಪ್ಪಲಿ ಅಲ್ಲೆ ಇಟ್ಟು ಹಾರಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ. ಇದೀಗ ಈತನಿಗಾಗಿ ಮುಳುಗು ತಜ್ಞರು ನೀರಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ಪ್ರಕರಣ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply