Connect with us

    LATEST NEWS

    Robbery : ಗನ್ ಪಾಯಿಂಟಲ್ಲಿ ಜ್ಯುವೆಲ್ಲರಿ ಶಾಪ್ ಲೂಟಿ, ಗುಂಡೇಟಿಗೆ ಮಾಲೀಕ ಸಾವು..!

    ಭಿವಾಡಿ : ಸಿಬ್ಬಂದಿಯನ್ನು ಗನ್‌ಪಾಯಿಂಟ್‌ನಲ್ಲಿಟ್ಟು ಆಭರಣ ಅಂಗಡಿಯನ್ನು ದರೋಡೆ ಮಾಡಿದ ಘಟನೆ ರಾಜಸ್ಥಾನದ ಭಿವಾಡಿಯಲ್ಲಿ ನಡೆದಿದ್ದು ಘಟನೆಯಲ್ಲಿನ ದರೋಡೆಕೋರರ ಗುಂಡಿನ ದಾಳಿಗೆ ಜ್ಯುವೆಲ್ಲರಿ ಮಾಲಿಕ ಸಾವನ್ನಪ್ಪಿದ್ದಾನೆ. ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಪೊಲೀಸರ ಪ್ರಕಾರ, ಶುಕ್ರವಾರ ಸಂಜೆ ಸುಮಾರು 7.30 ಕ್ಕೆ ಭಿವಾಡಿಯ ಕಮಲೇಶ್ ಜ್ಯುವೆಲರ್ಸ್‌ಗೆ 5 ಜನರ ಮುಖವಾಡ ಧರಿಸಿದ ದರೋಡೆಕೋರರು ಕಾರಿನಲ್ಲಿ ಬಂದು ನುಗ್ಗಿದ್ದಾರೆ. ಈ ಸಂದರ್ಭ ಗಾರ್ಡ್ ಸೇರಿದಂತೆ ಅಂಗಡಿಯಲ್ಲಿ ನಾಲ್ವರು ಇದ್ದರು. ದರೋಡೆಕೋರರು ಮೊದಲು ಅಂಗಡಿ ಸೆಕ್ಯೂರಿಟಿ  ಸಿಬ್ಬಂದಿ ಮೇಲೆ ದಾಳಿ ನಡೆಸಿ, ಅವರ ಬಂದೂಕನ್ನು ಕಸಿದು ಅಂಡಿಗೆ ನುಗ್ಗಿದ್ದಾರೆ. ಅಂಗಡಿಯಲ್ಲಿದ್ದ ಸಿಂಬದಿಯನ್ನು ಗನ್‌ಪಾಯಿಂಟ್‌ನಲ್ಲಿಟ್ಟು  ಹಲವರ ಮೇಲೆ ರಾಡ್‌ಗಳಿಂದ ದಾಳಿ ಮಾಡಿದ್ದಾರೆ. ಬಳಿಕ ಅಲ್ಲಿದ್ದ  ಚಿನ್ನಾಭರಣವನ್ನು ಗೋಣಿಚೀಲಗಳಲ್ಲಿ ತುಂಬಿಸಲು ಪ್ರಾರಂಭಿಸಿದ್ದಾರೆ.  ಈ ಸಂದರ್ಭ ಅಂಗಡಿ ಮಾಲಿಕ ಜೈ ಸಿಂಗ್ ಅವರು  ದರೋಡೆಕೋರರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಈ ಸಂದರ್ಭ ದರೋಡೆಕೋರರು  ಹೊರಗೆ ಓಡಿ ತಮ್ಮ ಕಾರಿಗೆ ಹತ್ತಲು ಯತ್ನಿಸಿದಾಗ  ಜೈ ಸಿಂಗ್ ಅವರ ಹಿಂದೆ ಹೋಗಿ ಕಾರಿನಿಂದ ಎಳೆಯಲು ಪ್ರಯತ್ನಿಸಿದಾಗ, ಅವರು ಅವರ ಮೇಲೆ ಗುಂಡು ಹಾರಿಸಿದ್ದಾರೆ.

    ಜೈ ಸಿಂಗ್  ರಕ್ಷಣೆಗೆ ಧಾವಿಸಿದ ಅವರ ಸಹೋದರ ಸಾಗರ್ ಸೋನಿ ಮತ್ತು ಸೆಕ್ಯೂರಿಟಿ ಗಾರ್ಡ್ ಕೂಡ ದರೋಡೆಕೋರರು ಹಾರಿಸಿದ ಗುಂಡಿಗೆ  ಗಾಯಗೊಂಡಿದ್ದಾರೆ. ದರೋಡೆಕೋರರು ಬಳಿಕ ಕಾರಿನಲ್ಲಿ ಎಸ್ಕೇಪ್ ಆಗಿದ್ದು  ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ ಜ್ಯುವೆಲ್ಲರಿ ಮಾಲಿಕ ಜೈ ಸಿಂಗ್ ಸೋನಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ. ಘಟನೆ ಯ ಬಗ್ಗೆ ತನಿಖೆ ಆರಂಭಿಸಿದ್ದು ಪೊಲೀಸರು ದರೋಡೆಕೋರರನ್ನು ಗುರುತಿಸಲು ಅಂಗಡಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸರು ದರೋಡೆಕೋರರು ಅಂಗಡಿಯ ಒಳಗೆ  10 ನಿಮಿಷಗಳ ಕಾಲ ಇದ್ದರು ಎಂದು ಹೇಳಿದ್ದಾರೆ. ಅಂಗಡಿಯ ಹೊರಗೆ ಇದ್ದ ಹಲವರು ಜನರು ಕೂಡ ಘಟನೆಯ ವೀಡಿಯೋ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.   

    Share Information
    Advertisement
    Click to comment

    You must be logged in to post a comment Login

    Leave a Reply