Connect with us

BANTWAL

ವೀರ ಸಾವರ್ಕರ್ ಗೆ ಜೈ ಘೋಷಣೆ – ಕ್ಷಮೆ ಯಾಚಿಸಿದ ಶಿಕ್ಷಕಿ: ವಿಡಿಯೋ ವೈರಲ್

Share Information

ಬಂಟ್ವಾಳ, ಆಗಸ್ಟ್ 18: ಸ್ವಾತಂತ್ರ್ಯ ದಿನಾಚರಣೆಯಂದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೆ ಜಯಕಾರ ಹಾಕಿದ್ದು, ಈ ಬಗ್ಗೆ ಎಸ್.ಡಿ.ಪಿ.ಐ ಸದಸ್ಯ ರೊಬ್ಬರು ಶಾಲಾ ಶಿಕ್ಷಕಿಯನ್ನು ಬೆದರಿಸಿ ಕ್ಷಮೆಯಾಚಿಸಿದ ಘಟನೆ ವಿಟ್ಲದ ಮಂಚಿ ಸರಕಾರಿ ಶಾಲೆಯಲ್ಲಿ ನಡೆದಿದೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ಜಯಘೋಷ ಹಾಕುವ ಸಮಯದಲ್ಲಿ ವಿದ್ಯಾರ್ಥಿಗಳಿಂದ ಸಾವರ್ಕರ್ ಗೆ ಜೈ ಘೋಷಣೆ ಕೂಗಿದ್ದರೆ. ಇದರಿಂದ ಕೆರಳಿದ ಎಸ್.ಡಿ.ಪಿ.ಐ ಸದಸ್ಯ ಬಶೀರ್  ರಂಪಾಟ ಮಾಡಿದ್ದಾರೆ.

ವಿದ್ಯಾರ್ಥಿಗಳ ಪರವಾಗಿ ಶಾಲಾ ಶಿಕ್ಷಕಿ ಕ್ಷಮೆ ಕೋರುವಂತೆ ಬೆದರಿಸಿದ್ದಾನೆ, ಬೆದರಿದ ಶಿಕ್ಷಕಿಯಿಂದ ಕ್ಷಮೆಯಾಚನೆ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಶಿಕ್ಷಕಿಯಿಂದ ಕ್ಷಮೆ ಕೇಳಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಇದೀಗ ಈ ವಿವಾದ ವಿಟ್ಲ ಪೋಲೀಸ್ ಠಾಣೆ ಮೆಟ್ಟಲೇರಿದೆ.


Share Information
Advertisement
Click to comment

You must be logged in to post a comment Login

Leave a Reply