Connect with us

    LATEST NEWS

    ಪ್ರವಾದಿ ಮೊಹಮ್ಮದ್ ಅವರನ್ನು ನಿಂದಿಸಿದವರ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ಬೆದರಿಕೆ ಒಡ್ಡಿದ ಉಗ್ರಸಂಘಟನೆ

    ನವದೆಹಲಿ: ಪ್ರವಾದಿ ಮೊಹಮ್ಮದ್ ಅವರನ್ನು ನಿಂದಿಸಿದವರಿಗೆ ಯಾವುದೇ ಕ್ಷಮೆಯಿಲ್ಲ ಅವರನ್ನು ನಿಂದಿಸುವವರ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ನಡೆಸುವುದಾಗಿ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಬೆದರಿಕೆ ಹಾಕಿದೆ.


    ಈ ಕುರಿತು ಜೂನ್ 6 ರಂದು ಬೆದರಿಕೆ ಪತ್ರವೊಂದನ್ನು ಬಿಡುಗಡೆ ಮಾಡಿರುವ ಅಲ್ ಖೈದಾ, ಪ್ರವಾದಿಯ ಘನತೆಗಾಗಿ ಹೋರಾಡಲು ದೆಹಲಿ, ಮುಂಬೈ, ಗುಜರಾತ್ ಹಾಗೂ ಉತ್ತರಪ್ರದೇಶದಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ತಿಳಿಸಿದೆ. ಅಲ್ಲದೆ, ಹಿಂದೂ ಪರ ಹೋರಾಟಗಾರರನ್ನು ಕೇಸರಿ ಭಯೋತ್ಪಾದಕರು ಎಂದು ಹೇಳಿದೆ.


    ಮಾನವೀಯತೆಯ ಹೆಮ್ಮೆಯ ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸುವವರಿಗೆ ಯಾವುದೇ ಕ್ಷಮಾದಾನ ಇರುವುದಿಲ್ಲ. ಯಾವುದೇ ಶಾಂತಿ ಮತ್ತು ಭದ್ರತೆ ಅವರನ್ನು ಉಳಿಸುವುದಿಲ್ಲ ಮತ್ತು ವಿಷಾದ ವ್ಯಕ್ತಪಡಿಸಿದರು, ಈ ವಿಚಾರ ಮುಕ್ತಾಯಗೊಳ್ಳುವುದಿಲ್ಲ. ಮನೆ ಅಥವಾ ಸೈನ್ಯದ ಕೋಟೆಯಲ್ಲಿಯೇ ಅಡಗಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ. ನಮ್ಮ ಪ್ರೀತಿಯ ಪ್ರವಾದಿಯವರನ್ನು ಅವಮಾನಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳದಿದ್ದರೆ, ನಮ್ಮ ತಾಯಿಯಂದಿರು ನಮ್ಮನ್ನು ಕಳೆದುಕೊಳ್ಳಲಿ. ಪ್ರವಾದಿಯವರನ್ನು ಅವಮಾನಿಸಿದವರ ಹತ್ಯೆ ಮಾಡುತ್ತೇವೆ. ಪ್ರವಾದಿಗಳ ಅವಮಾನಿಸಿದವರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ನಮ್ಮ ಹಾಗೂ ನಮ್ಮ ಮಕ್ಕಳದ ದೇಹದ ಮೇಲೆ ಸ್ಫೋಟಗಳನ್ನು ಹಾಕುತ್ತೇವೆಂದು ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply