Connect with us

KARNATAKA

ಸಿಂಧೂರಿಯವರೇ ನಿಮ್ಮ ಪೋಟೋ ಚಾಟಿಂಗ್ ನೋಡಿ ಕಾನೂನು ಮಂತ್ರಿ ಏನ್ ಕ್ಲಾಸ್ ತಗೊಂಡ್ರು ಅಂತ ಜನತೆಗೆ ತಿಳಿಸಿ…!!

ಬೆಂಗಳೂರು ಫೆಬ್ರವರಿ 20: ರಾಜ್ಯದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಡುವೆ ನಡೆಯುತ್ತಿರುವ ಸಮರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ರೋಹಣಿ ಸಿಂಧೂರಿ ಅವರ ಎಲ್ಲಾ ಆರೋಪಿಗಳಿಗೆ ಐಪಿಎಸ್ ಅಧಿಕಾರಿ ರೂಪಾ ಅವರು ಸರಿಯಾಗೇ ಉತ್ತರ ಕೊಡುತ್ತಿದ್ದಾರೆ.


ಸದ್ಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ನಡುವಿನ ಹಾದಿ ಬೀದಿ ಕಾಳಗ ಇಲ್ಲಿಗೆ ನಿಲ್ಲುವಂತೆ ಕಾಣಿಸುತ್ತಿಲ್ಲ. ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದು, ಇದು ಮತ್ತೊಂದು ತಿರುವು ಪಡೆದುಕೊಂಡಿದೆ.


ಸಿಂಧೂರಿ ಅವರೇ, ನಿಮ್ಮ ಈ ಚಾಟ್ಸ್, ಪಿಕ್ಸ್ ನೋಡಿ( ಅಂದರೆ ನಾನು ಈಗಾಗಲೇ ಇಲ್ಲಿ ಹಾಕಿದ ಪಿಕ್ಸ್) ನೋಡಿ ಈ ರಾಜ್ಯದ ಕಾನೂನು ಮಂತ್ರಿಯವರು ಶಕ್ತಿ ಸೌಧ, ವಿಧಾನ ಸೌಧದಲ್ಲಿ ನಿಮಗೆ ಏನು ಕ್ಲಾಸ್ ತಗೊಂಡು ಏನು ಬುದ್ಧಿವಾದ ಹೇಳಿದರು ಎನ್ನುವುದನ್ನು ಜನತೆಗೆ ತಿಳಿಸಿ ಎಂದು ರೂಪಾ ಅವರು ಫೇಸ್​ಬುಕ್​ನಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಸಿಂಧೂರಿ ಅವರೇ, ನಿಮ್ಮ ಈ ಚಾಟ್, ಪಿಕ್ಸ್ ನೋಡಿ ಈ ರಾಜ್ಯದ ಕಾನೂನು ಮಂತ್ರಿಯವರು ನಿಮಗೆ ಏನು class ತಗೊಂಡು ಏನು ಬುದ್ಧಿವಾದ ಹೇಳಿದರು ಶಕ್ತಿ ಸೌಧ ವಿಧಾನ ಸೌಧದಲ್ಲಿ ಅದನ್ನೂ ಜನತೆಗೆ ತಿಳಿಸಿ ಎಂದು ತಮ್ಮ ಫೇಸ್​ಬುಕ್ ಖಾತೆ ಮೂಲಕ ಪೋಸ್ಟ್ ಮಾಡಿದ್ದಾರೆ.

ಇನ್ನುಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದಿದ್ದಕ್ಕೆ ರೋಹಿಣಿ ವಿರುದ್ಧ ಮತ್ತೆ ಡಿ.ರೂಪಾ ಆಕ್ರೋಶಗೊಂಡಿದ್ದು, ನಿಮ್ಮ ಬಣ್ಣ ಈಗ ಬಯಲಾಗಿದ್ದಕ್ಕೆ ಇಂತಹ ಹತಾಶೆಯ ಮಾತೇ? ಒಂದು ಕಡೆ ಡಿ.ಕೆ.ರವಿ ಮಾನಸಿಕ ಅಸ್ವಸ್ಥತೆಯಿಂದ ಮೃತಪಟ್ಟಿದ್ದು ಅಂತ ಹೇಳ್ತೀರಿ. ನಿಮ್ಮನ್ನ ಎಕ್ಸ್​ಪೋಸ್​ ಮಾಡಿದ್ದಕ್ಕೆ ನನ್ನ ವಿರುದ್ಧ ಆರೋಪ ಮಾಡಿದ್ದೀರಿ.ನೀವು ಭ್ರಷ್ಟಾಚಾರ ಮಾಡಿದ ಚಾಟ್​ಗಳೂ ನನ್ನ ಬಳಿ ಇವೆ. ಬಹಿರಂಗವಾಗಿ ನೀವು ನನ್ನ ಕ್ಷಮೆಯಾಚಿಸಿ, ಇಲ್ಲದಿದ್ರೆ ಮಾನಹಾನಿ ಪ್ರಕರಣ ದಾಖಲಿಸುವುದಾಗಿ ರೋಹಿಣಿಗೆ ಎಚ್ಚರಿಕೆ ನೀಡಿದ್ದಾರೆ.

 

Advertisement
Click to comment

You must be logged in to post a comment Login

Leave a Reply