BANTWAL
ಬಂಟ್ವಾಳ – ಅಕ್ರಮ ಮರಳುಗಾರಿಗೆ ಅಡ್ಡೆ ಮೇಲೆ ಪೊಲೀಸ್ ದಾಳಿ
ಬಂಟ್ವಾಳ ಡಿಸೆಂಬರ್ 09 :ನೇತ್ರಾವತಿ ನದಿ ತೀರದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ದಾಳಿ ನಡೆಸಿ ಮರಳನ್ನು ವಶಪಡಿಸಿಕೊಂಡ ಘಟನೆ ಸರಪಾಡಿ ಎಂಬಲ್ಲಿ ನಡೆದಿದೆ.
ಸರಪಾಡಿ ಗ್ರಾಮದ ಬಿಯಪಾದೆ ಮೊಗರೋಡಿ ನೀರಿನ ಟ್ಯಾಂಕ್ ಬಳಿ ನೇತ್ರಾವತಿ ನದಿಯಲ್ಲಿ ಮರಳು ತೆಗೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಪೋಲೀಸರು ದಾಳಿ ನಡೆಸಿದಾಗ ನದಿಯಿಂದ ಬುಟ್ಟಿಯಲ್ಲಿ ಮರಳು ತೆಗೆಯುತ್ತಿದ್ದ ನೌಶಾದ್, ಜುಬೇರ್,ಸಂತೋಷ್ ಮತ್ತು ಸಂದೀಪ್ ಎಂಬವರು ಓಡಿ ಹೋಗಿದ್ದಾರೆ. ಆರೋಪಿಗಳು ಅಕ್ರಮವಾಗಿ ಮರಳು ತೆಗೆಯುತ್ತಿದ್ದು, ಒಂದು ಪಿಕಪ್ ಲೋಡಿನಷ್ಟು ಮರಳನ್ನು ರಾಶಿ ಹಾಕಿದ್ದರು. ವಶಪಡಿಸಿಕೊಂಡ ಮರಳಿನ ಮೌಲ್ಯ ರೂಪಾಯಿ 2 ಸಾವಿರ ಎಂದು ಅಂದಾಜಿಸಲಾಗಿದ್ದು, ಅಕ್ರಮ ಮರಳು ತೆಗೆಯುತ್ತಿದ್ದ ಆರೋಪಿಗಳ ಮೇಲೆ ಕಲಂ 379 ರಂತೆ ಕಳವು ಪ್ರಕರಣ ದಾಖಲಾಗಿದೆ.
You must be logged in to post a comment Login