Connect with us

    KARNATAKA

    ಹುಬ್ಬಳ್ಳಿ: ಸರಕು ಸಾಗಣೆಯಲ್ಲಿ ದಾಖಲೆ ನಿರ್ಮಿಸಿದ ನೈರುತ್ಯ ರೈಲ್ವೆ..!

    ಹುಬ್ಬಳ್ಳಿ : ನೈರುತ್ಯ ರೈಲ್ವೆಯು ಏಪ್ರಿಲ್-2023 ರಿಂದ ಜನವರಿ-2024 ರವರೆಗೆ ಅತ್ಯುತ್ತಮ ಸರಕು ಸಾಗಣೆ ಕಾರ್ಯಕ್ಷಮತೆಯನ್ನು ದಾಖಲಿಸಿದೆ. ನೈರುತ್ಯ ರೈಲ್ವೆಯು ಸರಕು ಮತ್ತು ಪಾರ್ಸೆಲ್ ಸಾರಿಗೆ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.

     

    ಸರಕು ವಲಯದಲ್ಲಿ, ನೈರುತ್ಯ ರೈಲ್ವೆ ಜನವರಿ-2024 ರವರೆಗೆ 40.96 ಮಿಲಿಯನ್ ಟನ್  ಸರಕು ಸಾಗಣೆ ಮಾಡಿದೆ, ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 8.76% ಹೆಚ್ಚಳವಾಗಿದೆ. ಜನವರಿ 2024 ರಲ್ಲಿ, ನೈರುತ್ಯ ರೈಲ್ವೆ 4.82 ಮಿಲಿಯನ್ ಟನ್ ಸರಕುಗಳನ್ನು ಲೋಡ್ ಮಾಡಿದೆ, ಇದು ಮಾರ್ಚ್ 2023 ರ ನಂತರ ಎರಡನೇ ಅತಿ ಹೆಚ್ಚು ಮಾಸಿಕ ಲೋಡ್ ಆಗಿದೆ. ಜನವರಿ 31, 2024 ರಂದು, ನೈಋತ್ಯ ರೈಲ್ವೆ 3431 ವ್ಯಾಗನ್ ಗಳನ್ನು ಲೋಡ್ ಮಾಡುವ ಮೂಲಕ ಹಿಂದಿನ ಅತ್ಯುತ್ತಮ ದಾಖಲೆಯನ್ನು ಮೀರಿ ಎರಡನೇ ಅತಿ ಹೆಚ್ಚು ಏಕ-ದಿನದ ಲೋಡಿಂಗ್ ಅನ್ನು ಸಾಧಿಸಿದೆ. ಸರಕು ಸಾಗಣೆ ಘಟಕ ಅಂದರೆ ಏನ್.ಟಿ.ಕೆ.ಎಂ  (ನೆಟ್ ಟನ್ ಕಿಲೋಮೀಟರ್) ಸಹ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 4.4% ರಷ್ಟು ಅತ್ಯುತ್ತಮ ಬೆಳವಣಿಗೆಯನ್ನು ದಾಖಲಿಸಿದೆ.

    ನೈರುತ್ಯ ರೈಲ್ವೆಯು  ಆಟೋಮೊಬೈಲ್ ವಲಯದಲ್ಲಿ ಗಮನಾರ್ಹ ತಯಾರಕರಾದ  ಟಿವಿಎಸ್, ಕೆಐಎ, ಮಾರುತಿ ಸುಜುಕಿ, ಟಾಟಾ, ಟೊಯೊಟಾ ಕಂಪನಿಗಳಿಗೆ ಆದ್ಯತೆಯ ಸಾರಿಗೆ ಆಯ್ಕೆಯಾಗಿ ಹೊರಹೊಮ್ಮಿದೆ, ಜನವರಿ 2024 ರವರೆಗೆ 558 ಆಟೋಮೊಬೈಲ್ ರೇಕ್ ಗಳನ್ನು  ಸಾಗಿಸಿದೆ, ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 37.1 ರಷ್ಟು ಹೆಚ್ಚಳವಾಗಿದೆ. ಜನವರಿ 2024 ರಲ್ಲಿ, ನೈರುತ್ಯ ರೈಲ್ವೆಯು  69 ಆಟೋಮೊಬೈಲ್ ರೇಕ್ ಗಳನ್ನು ಲೋಡ್ ಮಾಡುವ ಮೂಲಕ ಒಂದು ತಿಂಗಳಲ್ಲಿ ತನ್ನ ಅತ್ಯುತ್ತಮ ಆಟೋಮೊಬೈಲ್ ಲೋಡ್ ಅನ್ನು ಸಾಧಿಸಿದೆ  (ವಿಭಾಗವಾರು; ಬೆಂಗಳೂರು -65 ರೇಕ್ ಗಳು , ಮೈಸೂರು -3 ರೇಕ್ ಗಳು, ಹುಬ್ಬಳ್ಳಿ -1 ರೇಕ್).
    ಇದಲ್ಲದೆ ನೈರುತ್ಯ ರೈಲ್ವೆಯು ಕಬ್ಬಿಣದ ಅದಿರು, ಸಿಮೆಂಟ್, ಉಕ್ಕು, ಖನಿಜ ತೈಲ, ರಸಗೊಬ್ಬರ, ಆರ್ ಎಂ ಎಸ್ ಪಿ , ಕಲ್ಲಿದ್ದಲು, ಆಹಾರ ಧಾನ್ಯಗಳು, ಕಂಟೇನರ್  ಮತ್ತು ಇತರ ಸರಕುಗಳ ಗಣನೀಯ ಸಾಗಣೆಯನ್ನು ಸಾಧಿಸಿದೆ. ಇದರ ಪರಿಣಾಮವಾಗಿ, ನೈಋತ್ಯ ರೈಲ್ವೆ ಜನವರಿ 2024 ರ ವೇಳೆಗೆ 4055.32 ಕೋಟಿ ರೂ.ಗಳ ಸರಕು ಆದಾಯವನ್ನು ಗಳಿಸಿದೆ, ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ಆದಾಯಕ್ಕೆ ಹೋಲಿಸಿದರೆ ಶೇ 10.36% ಹೆಚ್ಚಳವಾಗಿದೆ.
    ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸಲು ನೈರುತ್ಯ ರೈಲ್ವೆ ವ್ಯಾಪಾರಿಗಳು, ರೈತರು ಮತ್ತು ತಯಾರಕರನ್ನು ಸಕ್ರಿಯವಾಗಿ ತಲುಪುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಹಕ-ಮೊದಲು ಮತ್ತು ಪರಿಹಾರ-ಆಧಾರಿತ ವಿಧಾನಕ್ಕೆ ಸಮರ್ಪಿತರಾಗಿದ್ದಾರೆ, ಗ್ರಾಹಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಪರಿಹರಿಸುವ ಗುರಿಯನ್ನು ಹೊಂದಿದ್ದಾರೆ. ಈ ಸಕಾರಾತ್ಮಕ ವಿಧಾನವು ಆಟೋಮೊಬೈಲ್ ಮತ್ತು ಕಬ್ಬಿಣದ ಅದಿರು ಲೋಡಿಂಗ್ ಹೆಚ್ಚಳಕ್ಕೆ ಕಾರಣವಾಗಿದೆ.
    ಪ್ರಧಾನ ವ್ಯವಸ್ಥಾಪಕ ಶ್ರೀ ಸಂಜೀವ್ ಕಿಶೋರ್ ಅವರು ಅಧಿಕಾರಿಗಳ ಮತ್ತು ಸಿಬ್ಬಂದಿಯ ಪ್ರಯತ್ನಗಳನ್ನು ಅಭಿನಂದಿಸಿದರು  ಮತ್ತು ರೈಲ್ವೆಯೊಂದಿಗೆ ತಮ್ಮ ನಂಬಿಕೆಯನ್ನು ಉಳಿಸಿಕೊಂಡಿದ್ದಕ್ಕಾಗಿ ಸರಕು ಮತ್ತು ಪಾರ್ಸೆಲ್ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು.
    Share Information
    Advertisement
    Click to comment

    You must be logged in to post a comment Login

    Leave a Reply