Connect with us

    BELTHANGADI

    ಸಂಕಷ್ಟ ನಿವಾರಣೆಗೆ ಮಂಜುನಾಥನ ಮೊರೆ ಹೋದ ಎಚ್ ಡಿ ರೇವಣ್ಣ

    ಧರ್ಮಸ್ಥಳ , ಮೇ 27: ಪೆನ್ ಡ್ರೈವ್ ಹಾಗು ಕಿಡ್ನಾಪ್ ಪ್ರಕರಣದ ಬೆನ್ನಲ್ಲೇ ಮಾಜಿ ಸಚಿವ ಎಚ್ ಡಿ ರೇವಣ್ಣ ಇಂದು ಧರ್ಮಸ್ಥಳ ಕ್ಕೆ ಬೇಟಿನೀಡಿ ದೇವರ ದರ್ಶನ ಪಡೆದಿದ್ದಾರೆ.

    ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ರೇವಣ್ಣ,ನಾನು ನಲ್ವತ್ತು ವರ್ಷದಿಂದ ರಾಜಕೀಯದಲ್ಲಿದ್ದೇನೆ, ಇಪ್ಪತ್ತೈದು ವರ್ಷಗಳಿಂದ ಶಾಸಕನಾಗಿದ್ದೇನೆ, ನನಗೆ ಕಾನೂನು ಬಗ್ಗೆ ಗೌರವ ಇದೆ, ನನಗೆ ದೇವರ ಬಗ್ಗೆ ನಂಬಿಕೆ ಇದೆ. ಕೋರ್ಟ್ ನಲ್ಲಿರುವಾಗ ಯಾವುದೇ ವಿಷಯ ಹೇಳಲ್ಲ, ನನಗೆ ಮಂಜುನಾಥ ಸ್ವಾಮಿಯೇ ಎಲ್ಲ. ಎಲ್ಲಾ ಕ್ಷೇತ್ರದಿಂದ ಹೆಚ್ಚಾಗಿ ನನಗೆ ಮಂಜುನಾಥ ಸ್ವಾಮಿ

    ಸೋಮವಾರದ ದಿನ ಮಂಜುನಾಥ ನ ದರ್ಶನ ಮಾಡಿದ್ದೇನೆ, ಸಚಿವರಾದಾಗಲೂ ಇಲ್ಲಿ ಬಂದಿದ್ದೇನೆ, ರಾಜ್ಯ ಜನರ ಮೇಲೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಹಾಸನ ಚಲೋ ದ ಬಗ್ಗೆ ಗೊತ್ತಿಲ್ಲ, ದೇವೇಗೌಡರ ಪತ್ರದ ಬಗ್ಗೆಯೂ ಗೊತ್ತಿಲ್ಲ, ಎಲ್ಲಾ ಮುಗಿದ ಮೇಲೆ ಮತ್ತೆ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬರ್ತೀನಿ ಎಂದು ಧರ್ಮಸ್ಥಳದಲ್ಲಿ ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply