Connect with us

LATEST NEWS

ಕರಾವಳಿಗರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ – ದೀಪಾವಳಿಗಾಗಿ ಮೈಸೂರು-ಬೆಂಗಳೂರು- ಮಂಗಳೂರು ವಿಶೇಷ ರೈಲು

ಮಂಗಳೂರು ನವೆಂಬರ್ 09: ದೀಪಾವಳಿ ಹಬ್ಬಕ್ಕೆ ಊರಿಗೆ ಬರುವ ಕರಾವಳಿಗರಿಗೆ ರೈಲ್ವೆ ಇಲಾಖೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದು, ಬೆಂಗಳೂರು ಮೈಸೂರಿನಿಂದ ಕರಾವಳಿ ಭಾಗಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಮೈಸೂರು-ಬೆಂಗಳೂರು -ಮಂಗಳೂರು ವಿಶೇಷ ರೈಲು ಸಂಚರಿಸಲಿದೆ.

ದೀಪಾವಳಿ ಸಂದರ್ಭ ಬೆಂಗಳೂರಿನಿಂದ ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಬಸ್ ದರ ವಿಪರೀತ ಹೆಚ್ಚಿದ್ದು, ಟಿಕೆಟ್ ಕೂಡ ಸಿಗುವುದು ಕಷ್ಟವಿದೆ. ಈ ಹಿನ್ನಲೆ ಇದೀಗ ರೈಲ್ವೆ ಇಲಾಖೆ ಕರಾವಳಿಗರಿಗಾಗಿ ಒಂದು ವಿಶೇಷ ರೈಲನ್ನು ಓಡಿಸಲಿದೆ.  ದೀಪಾವಳಿ ಹಬ್ಬದ ಮುಂಚಿನ ದಿನದಂದು ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ವಿಶೇಷ ರೈಲು ಮೈಸೂರು-ಮಂಗಳೂರು ರೈಲು ಬೆಂಗಳೂರು ಮಾರ್ಗವಾಗಿ ಒಂದು ಟ್ರಿಪ್‌ ಸಂಚಾರ ಮಾಡುತ್ತದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.


ರೈಲು ನಂಬರ್‌ 07303 ಮೈಸೂರಿನಿಂದ ಮಂಗಳೂರಿಗೆ ನವೆಂಬರ್ 10 ರಂದು ರಾತ್ರಿ 8.30ಕ್ಕೆ ಮೈಸೂರಿನಿಂದ ಹೊರಟು ನವೆಂಬರ್‌ 11 ರಂದು ಬೆಳಿಗ್ಗೆ 9:40 ಕ್ಕೆ ಮಂಗಳೂರು ತಲುಪಲಿದೆ. ರೈಲು ಮಾರ್ಗದಲ್ಲಿ ಮಂಡ್ಯ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳದಲ್ಲಿ ನಿಲುಗಡೆಯಾಗಲಿದೆ.

ರೈಲು ನಂಬರ್‌ 07304 ಮಂಗಳೂರಿನಿಂದ ಮೈಸೂರಿಗೆ ನವೆಂಬರ್‌ 11 ರಂದು ಬೆಳಿಗ್ಗೆ 11.40ಕ್ಕೆ ಮಂಗಳೂರಿನಿಂದ ಹೊರಟು ನವೆಂಬರ್‌ 12 ರಂದು ಮಧ್ಯರಾತ್ರಿ 12.50ಕ್ಕೆ ಮೈಸೂರು ತಲುಪಲಿದೆ. ಈ ರೈಲು ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪಟ್ಟಣ, ಹಾಸನ, ಶ್ರವಣಬೆಳಗೊಳ, ಕುಣಿಗಲ್, ನೆಲಮಂಗಲ, ಚಿಕ್ಕಬಾಣಾವರ, ಯಶವಂತಪುರ, ಕೆಎಸ್‌ಆರ್ ಬೆಂಗಳೂರು, ಕೆಂಗೇರಿ ಮತ್ತು ಮಂಡ್ಯದಲ್ಲಿ ನಿಲುಗಡೆಯಾಗಲಿದೆ.

Share Information
Advertisement
Click to comment

You must be logged in to post a comment Login

Leave a Reply