Connect with us

    KARNATAKA

    ಇಬ್ಬರನ್ನು ಕೊಲೆಗೈದು ಮನೆ ದರೋಡೆ ಮಾಡಿ ದುಷ್ಕರ್ಮಿಗಳು ಪರಾರಿ …!

    ಬೆಂಗಳೂರು :ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ‌ ಮಾಡಿ ಇಬ್ಬರನ್ನು ಕೊಲೆಗೈದು ಮನೆ ದರೋಡೆ ಮಾಡಿದ ಘಟನೆ ಬೆಂಗಳೂರಿನ  ಜೆ.ಪಿ ನಗರದ 7ನೇ ಹಂತದ ಪುಟ್ಟೆನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಕೊಲೆಯಾದವರು ಮಮತ ಬಸು (75),ದೇವ ಬ್ರಥಾ ಮೆಹರ( 41) ಎಂದು ಗುರುತ್ತಿಸಲಾಗಿದೆ.

    ತಡ ರಾತ್ರಿ ಈ ಕೃತ್ಯ ಮಾಡಿದ ದುಷ್ಕರ್ಮಿಗಳು ಮನೆಯಲ್ಲಿ ಇದ್ದ ಲ್ಯಾಪ್ ಟಾಪ್ , ಹಾಗೂ ಚಿನ್ನಾಭರಣಗಳೊಂದಿಗೆ  ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.

    ರಾತ್ರಿ 1.30ರ ಸುಮಾರಿಗೆ ಬೈಕ್‌ನಲ್ಲಿ ಬಂದಿದ್ದ  ದುಷ್ಕರ್ಮಿಗಳಿಂದ  ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.

    ಬಳಿಕ ಮನೆಯಲ್ಲಿದ್ದ ಲ್ಯಾಪ್‌ಟಾಪ್, ಮೊಬೈಲ್, ಚಿನ್ನಾಭರಣ,ಎಟಿಎಂ ಕಾರ್ಡ್‌ಗಳನ್ನು ಕದ್ದೊಯ್ದಿರುವ ದುಷ್ಕರ್ಮಿ,ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

    ಒರಿಸ್ಸಾ ಮೂಲದ ಕುಟುಂಬ ದೇವಬ್ರತಾಗೆ ಬೆಂಗಳೂರಿನಲ್ಲಿ ಉದ್ಯೋಗ ದೊರಕಿತ್ತು.

    ಕಾಲೇಜ್ ಒಂದರಲ್ಲಿ ಲೆಕ್ಟರರ್ ಆಗಿ ಉದ್ಯೋಗ ಮಾಡುತ್ತಿದ್ದ,ಹಾಗಾಗಿ 20 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ.

    ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್, ಡಿಸಿಪಿ ಹರೀಶ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪುಟ್ಟೇನಹಳ್ಳಿ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply