LATEST NEWS
ಪಾಳು ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಣೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಐದು ಮಂದಿ ಯುವಕರು
ಮಹಾರಾಷ್ಟ್ರ ಎಪ್ರಿಲ್ 10: ಪಾಳು ಬಾವಿಗೆ ಬಿದ್ದಿದ್ದ ಬೆಕ್ಕನ್ನು ರಕ್ಷಣೆ ಮಾಡಲು ಹೋಗಿ 5 ಮಂದಿ ತಮ್ಮ ಜೀವವನ್ನೆ ಬಲಿಕೊಟ್ಟ ಘಟನೆ ಮಹಾರಾಷ್ಟ್ರದ ಅಹ್ಮದ್ ನಗರದ ವಡ್ಕಿ ಎಂಬ ಗ್ರಾಮದಲ್ಲಿ ನಡೆದಿದೆ.
ರೈತರೊಬ್ಬರು ಬಯೋ ಗ್ಯಾಸ್ ಸ್ಲರಿ ಗಾಗಿ ಮಾಡಿಟ್ಟಿದ್ದ ಬಾಳು ಬಾವಿಗೆ ಬೆಕ್ಕೊಂದು ಬಿದ್ದಿತ್ತು, ಅದನ್ನು ರಕ್ಷಣೆ ಮಾಡಲು ಒಬ್ಬರು ಹೋಗಿ ಸಿಕ್ಕಿಬಿದಿದ್ದಾರೆ. ಈ ವೇಳೆ ಒಬ್ಬರಂತೆ ಒಬ್ಬರು ಪಾಳು ಬಾವಿಗೆ ಬಿದ್ದು, ಸಾವನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸೇರಿದಂತೆ ಸ್ಥಳೀಯರು ಬಾವಿಗೆ ಬಿದ್ದಿದ್ದ ವ್ಯಕ್ತಿಗಳ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಎಲ್ಲರೂ ಸಾವನಪ್ಪಿದ್ದರು ಎಂದು ತಿಳಿದು ಬಂದಿದೆ.
You must be logged in to post a comment Login