LATEST NEWS
ಪಾಳು ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಣೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಐದು ಮಂದಿ ಯುವಕರು
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮಹಾರಾಷ್ಟ್ರ ಎಪ್ರಿಲ್ 10: ಪಾಳು ಬಾವಿಗೆ ಬಿದ್ದಿದ್ದ ಬೆಕ್ಕನ್ನು ರಕ್ಷಣೆ ಮಾಡಲು ಹೋಗಿ 5 ಮಂದಿ ತಮ್ಮ ಜೀವವನ್ನೆ ಬಲಿಕೊಟ್ಟ ಘಟನೆ ಮಹಾರಾಷ್ಟ್ರದ ಅಹ್ಮದ್ ನಗರದ ವಡ್ಕಿ ಎಂಬ ಗ್ರಾಮದಲ್ಲಿ ನಡೆದಿದೆ.
ರೈತರೊಬ್ಬರು ಬಯೋ ಗ್ಯಾಸ್ ಸ್ಲರಿ ಗಾಗಿ ಮಾಡಿಟ್ಟಿದ್ದ ಬಾಳು ಬಾವಿಗೆ ಬೆಕ್ಕೊಂದು ಬಿದ್ದಿತ್ತು, ಅದನ್ನು ರಕ್ಷಣೆ ಮಾಡಲು ಒಬ್ಬರು ಹೋಗಿ ಸಿಕ್ಕಿಬಿದಿದ್ದಾರೆ. ಈ ವೇಳೆ ಒಬ್ಬರಂತೆ ಒಬ್ಬರು ಪಾಳು ಬಾವಿಗೆ ಬಿದ್ದು, ಸಾವನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸೇರಿದಂತೆ ಸ್ಥಳೀಯರು ಬಾವಿಗೆ ಬಿದ್ದಿದ್ದ ವ್ಯಕ್ತಿಗಳ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಎಲ್ಲರೂ ಸಾವನಪ್ಪಿದ್ದರು ಎಂದು ತಿಳಿದು ಬಂದಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
You must be logged in to post a comment Login